ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?

|

Updated on: Oct 08, 2024 | 3:59 PM

ಜಾಮೀನಿಗಾಗಿ ದರ್ಶನ್​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸದ್ಯದಲ್ಲೇ ನಡೆಯಲಿದೆ. ಹಲವು ಬಾರಿ ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು. ಈಗಲಾದರೂ ಜಾಮೀನು ಸಿಗಬಹುದಾ ಎಂಬ ಕೌತುಕ ಅವರ ಆಪ್ತರಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್​ ಮತ್ತು ಎ1 ಪವಿತ್ರಾ ಅವರ ಅರ್ಜಿ ವಿಚಾರಣೆ ಕೂಡ ಇಂದು (ಅ.8) ನಡೆಯಲಿದೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್​ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹಾಗಿದ್ದರೂ ಕೂಡ ಅವರು ಚಿಕಿತ್ಸೆ ಪಡೆದಿಲ್ಲ. ದರ್ಶನ್​ ಮೊಂಡುತನದಿಂದ ಅಧಿಕಾರಿಗಳಿಗೆ ಸಮಸ್ಯೆ ಆಗಿದೆ. ಹಾಗಾಗಿ ದರ್ಶನ್ ಅನಾರೋಗ್ಯ ಮತ್ತು ಚಿಕಿತ್ಸೆ ಬಗ್ಗೆ ಸಮಗ್ರ ವರದಿಯನ್ನು ವಿಮ್ಸ್​ ವೈದ್ಯರಿಂದ ಜೈಲಾಧಿಕಾರಿಗಳು ಕೇಳಿದ್ದಾರೆ. ಜಾಮೀನು ಪಡೆಯಲು ದರ್ಶನ್​ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಬೆಂಗಳೂರಿಗೆ ಬಂದು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್​ ತೀರ್ಮಾನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on