ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಜನವರಿಯಲ್ಲೇ ಹೇಳಿದ್ದೆ; ಮನೋ ವೈದ್ಯೆ

| Updated By: ರಾಜೇಶ್ ದುಗ್ಗುಮನೆ

Updated on: Jun 22, 2024 | 8:48 AM

ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯ ಪ್ರಾಣವೇ ಹೋಗಿದೆ. ಇದಕ್ಕೆ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದಾರೆ. ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಆಗಲೇ ಹೇಳಿದ್ದೆ ಎಂದಿದ್ದಾರೆ ವೈದ್ಯೆ.

ದರ್ಶನ್ (Darshan) ಅವರು ಇತ್ತೀಚೆಗೆ ಸಾಕಷ್ಟು ಅಗ್ರೆಸ್ಸಿವ್ ಆಗಿದ್ದರು. ಸಣ್ಣ ವಿಚಾರಕ್ಕೂ ಅವರಿಗೆ ಸಾಕಷ್ಟು ಕೋಪ ಬರುತ್ತಿತ್ತು. ಇದೇ ಅವರಿಗೆ ಮುಳುವಾಗಿದೆ. ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯ ಪ್ರಾಣವೇ ಹೋಗಿದೆ. ಇದಕ್ಕೆ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದಾರೆ. ‘ಜನವರಿ-ಫೆಬ್ರವರಿಯಲ್ಲಿ ದರ್ಶನ್ ಅವರ ವಿಡಿಯೋ ನೋಡಿದೆ. ಅವರಲ್ಲಿ ಸಾಕಷ್ಟು ನೆಗೆಟಿವ್ ಥಾಟ್ ಇತ್ತು. ಚಿತ್ರರಂಗದಲ್ಲಿ ಗೊತ್ತಿದ್ದವರಿಗೆ ಮೆಸೇಜ್ ಮಾಡಿದೆ. ದರ್ಶನ್​ಗೆ ಕೌನ್ಸಲಿಂಗ್ ಮಾಡಿಸಿ ಎಂದಿದ್ದೆ. ಅವರನ್ನು ನಿಯಂತ್ರಿಸಬೇಕು ಎಂದು ಕರೆದಿದ್ದೆ’ ಎಂದಿದ್ದಾರೆ ಚಂದ್ರಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on