ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ದರ್ಶನ್​ ಆ್ಯಂಡ್ ಗ್ಯಾಂಗ್

Updated on: Aug 15, 2025 | 10:21 AM

ನಟ ದರ್ಶನ್ ಅವರು ಸದ್ಯ ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೆ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲಿ ಹಲವು ಸಾಕ್ಷಿಗಳು ಸಿಕ್ಕಿದ್ದು ದರ್ಶನ್​ಗೆ ಮುಳುವಾಗಿದೆ. ಈಗ ದರ್ಶನ್ ಸೇರಿ ನಾಲ್ವರು ಒಂದೇ ಸೆಲ್​ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ (Darshan) ಹಾಗೂ ಇತರ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಈ ಬೆನ್ನಲ್ಲೇ ದರ್ಶನ್ ಸೇರಿದಂತೆ ಬೆಂಗಳೂರಿನಲ್ಲಿದ್ದ ಐವರನ್ನು ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರಾತ್ರಿ ಕಳೆದಿದೆ. ಒಂದೇ ಬ್ಯಾರಕ್​ನಲ್ಲಿ ದರ್ಶನ್​, ನಾಗರಾಜ್​, ಲಕ್ಷ್ಮಣ್, ಪ್ರದೋಶ್​ನ ಇಡಲಾಗಿದೆ. ಸದ್ಯ ಇವರು ಕ್ವಾರಂಟೈನ್ ಬ್ಯಾರಕ್​ನಲ್ಲಿ ಇದ್ದಾರೆ. ಶೀಘ್ರವೇ ಇವರಿಗೆ ಕೈದಿ ಸಂಖ್ಯೆ ಸಿಗಲಿದೆ. ನಿನ್ನೆ ರಾತ್ರಿ ಆರೋಪಿಗಳಿಗೆ ಮುದ್ದೆ, ಚಪಾತಿ, ಅನ್ನಸಾಂಬರ್ ಊಟ ನೀಡಲಾಗಿದೆ. ರಾತ್ರಿ ಜೈಲಿನಲ್ಲಿ ನಿದ್ದೆ ಮಾಡದೆ ದರ್ಶನ್ ಮತ್ತು ನಾಗರಾಜ್​ ಇತರರು ಹರಟೆ ಹೊಡೆದಿದ್ದಾರೆ. ಜೈಲಿನಲ್ಲಿ‌ ತಡರಾತ್ರಿವರೆಗೂ ಪ್ರದೋಶ್ ಕಣ್ಣೀರು ಹಾಕಿದ್ದಾರೆ. ಜೈಲಿನ ಮಹಿಳಾ ಬ್ಯಾರಕ್​ನಲ್ಲಿ ಪವಿತ್ರಾಗೌಡ ಅವರನ್ನು ಇರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 15, 2025 10:18 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More