Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್‌ಕುಮಾರ್ ಕಾಲು ಧೂಳಿಗೂ ನಾವು ಸಮ ಅಲ್ಲ’: ದರ್ಶನ್ ಹೀಗೆ ಹೇಳಿದ್ದೇಕೆ?

‘ರಾಜ್‌ಕುಮಾರ್ ಕಾಲು ಧೂಳಿಗೂ ನಾವು ಸಮ ಅಲ್ಲ’: ದರ್ಶನ್ ಹೀಗೆ ಹೇಳಿದ್ದೇಕೆ?

ಮದನ್​ ಕುಮಾರ್​
| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2024 | 10:05 PM

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಹಿಟ್ ಸಿನಿಮಾಗಳ ಸಾಲಿಗೆ ‘ಕಾಟೇರ’ ಕೂಡ ಸೇರಿಕೊಂಡಿದೆ. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯವೊಂದರಲ್ಲಿ ದರ್ಶನ್ ಅವರು ಹಿರಣ್ಯ ಕಶಿಪು ಪಾತ್ರದ ಡೈಲಾಗ್ ಹೇಳಿದ್ದು ಹೈಲೈಟ್ ಆಗಿದೆ.

‘ಕಾಟೇರ’ ಸಿನಿಮಾದಲ್ಲಿ ದರ್ಶನ್ (Darshan) ಅವರು ಎರಡು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಒಂದು ದೃಶ್ಯದಲ್ಲಿ ಅವರು ಹಿರಣ್ಯ ಕಶಿಪು ಪಾತ್ರದ ಡೈಲಾಗ್ ಹೇಳಿರುವುದು ಎಲ್ಲರ ಗಮನ ಸೆಳೆದಿದೆ. ಇದನ್ನು ನೋಡಿದವರಿಗೆ ಡಾ. ರಾಜ್‌ಕುಮಾರ್ (Dr Rajkumar) ನೆನಪಾಗಿದೆ. ಈ ಬಗ್ಗೆ ಕಾಟೇರ’ (Kaatera) ಸಕ್ಸಸ್ ಮೀಟ್‌ನಲ್ಲಿ ಎದುರಾದ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದಾರೆ. ‘ಡಾ. ರಾಜ್‌ಕುಮಾರ್ ಅವರ ಹೆಸರು ಹೇಳುವುದಕ್ಕೆ ಅಲ್ಲ, ಅವರ ಕಾಲು ಧೂಳಿಗೂ ನಾವು ಸಮ ಅಲ್ಲ. ಪ್ರಯತ್ನ ಮಾಡಬಹುದು.‌ ಆದರೆ ಅವರು ಮಾಡಿದ್ದರಲ್ಲಿ ಶೇಕಡ 0.001ರಷ್ಟು ಕೂಡ ನಾವು ಮಾಡಿಲ್ಲ’ ಎಂದಿದ್ದಾರೆ ದರ್ಶನ್.

ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ