ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ

Updated on: Jul 10, 2025 | 10:53 AM

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಇಂದು ಕೋರ್ಟ್​ ಎದುರು ಹಾಜರಿ ಹಾಕಬೇಕಿದೆ. ಅದಕ್ಕೂ ಮೊದಲು ಅವರು ಮನೆಯ ಹೊರಗೆ ಕಾಣಿಸಿಕೊಂಡದರು. ದರ್ಶನ್ ದೈವ ಭಕ್ತ. ಹೀಗಾಗಿ, ಮನೆಯಿಂದ ಹೊರಡುವ ಮುನ್ನ ಅವರು ತುಳಸಿ ಗಿಡಕ್ಕೆ ಕೈ ಮುಗಿದರು.

ನಟ ದರ್ಶನ್ ಅವರು ದೇವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಇಂದು (ಜಲೈ 10) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಕೋರ್ಟ್​ಗೆ ಹಾಜರಿ ಹಾಕಬೇಕಿದೆ. ಮನೆಯಿಂದ ಹೊರಡುವುದಕ್ಕೂ ಮೊದಲು ಅವರು ತುಳಸಿ ಗಿಡಕ್ಕೆ ನೀರನ್ನು ಹಾಕಿ, ಮೇಲಕ್ಕೆ ನೋಡಿ ನಮಸ್ಕರಿಸಿದರು. ಇದು ದೇವರ ಮೇಲೆ ಅವರಿಗೆ ಇರೋ ಭಕ್ತಿಯನ್ನು ತೋರಿಸುತ್ತದೆ. ‘ಡೆವಿಲ್’ ಶೂಟ್​ಗಾಗಿ ದರ್ಶನ್ ವಿದೇಶಕ್ಕೆ ತೆರಳಲಿದ್ದಾರೆ. ಅದಕ್ಕೂ ಮೊದಲು ಅವರು ಕೋರ್ಟ್​ನಿಂದ ಅನುಮತಿ ಕೂಡ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 10, 2025 10:52 AM