ಕಾಟೇರ ಪಾರ್ಟಿ ಕೇಸ್​; ವಿಚಾರಣೆ ಎದುರಿಸಲು ಪೊಲೀಸ್​ ಠಾಣೆಗೆ ಬಂದ ದರ್ಶನ್​

ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆಗೆ ಬಂದು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ ಅವರು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಆಗಮನದ ಸುದ್ದಿ ತಿಳಿದು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟೇಷನ್​ ಮುಂದೆ ಜಮಾಯಿಸಿದ್ದಾರೆ. ದರ್ಶನ್​ ಬಂದ ಕೂಡಲೇ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.

ಕಾಟೇರ ಪಾರ್ಟಿ ಕೇಸ್​; ವಿಚಾರಣೆ ಎದುರಿಸಲು ಪೊಲೀಸ್​ ಠಾಣೆಗೆ ಬಂದ ದರ್ಶನ್​
| Updated By: ಮದನ್​ ಕುಮಾರ್​

Updated on: Jan 12, 2024 | 5:33 PM

ನಟ ದರ್ಶನ್​ ಅವರು ಸುಬ್ರಹ್ಮಣ್ಯ ನಗರ ಪೊಲೀಸ್​ (Subramanya Nagar Police) ಠಾಣೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪಬ್​ವೊಂದರಲ್ಲಿ ಮಧ್ಯ ರಾತ್ರಿಯ ನಂತರ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದಲ್ಲಿ ಅವರಿಗೆ ನೋಟಿಸ್​ ನೀಡಲಾಗಿತ್ತು. ಹಾಗಾಗಿ ಪೊಲೀಸ್​ ಠಾಣೆಗೆ ಬಂದು ದರ್ಶನ್ (Darshan) ಅವರು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಆಗಮನದ ಸುದ್ದಿ ತಿಳಿದು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟೇಷನ್​ ಮುಂದೆ ಜಮಾಯಿಸಿದ್ದಾರೆ. ದರ್ಶನ್​ ಬಂದ ಕೂಡಲೇ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ‘ಕಾಟೇರ’ ಸಿನಿಮಾ (Kaatera Movie) ಸೂಪರ್ ಹಿಟ್​ ಆಗಿದೆ. ಆದರ ಖುಷಿಯಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆಗೂಡಿ ದರ್ಶನ್​ ಅವರು ಪಾರ್ಟಿ ಮಾಡಿದ್ದರು. ನಿಯಮ ಉಲ್ಲಂಘಿಸಿ ಬೆಳಗಿನ ಜಾವದ ತನಕ ಪಬ್​ನಲ್ಲಿ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us