ಆನೇಕಲ್ (ಬೆಂಗಳೂರು): ಇವರು ಶಿವಕುಮಾರ್ ಅಂತ. ಚಿತ್ರ ನಿರ್ಮಾಕರಾಗಿರುವ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸೆಂಟ್ರಲ್ ಜೈಲಿನಲ್ಲಿರುವ ಚಿತ್ರನಟ ದರ್ಶನ್ ಅವರ ಚೆಡ್ಡೀ ದೋಸ್ತ್ ಕೂಡ ಹೌದು. ಇಂದು ಶಿವಕುಮಾರ್ ತಮ್ಮ ಗೆಳೆಯನನ್ನು ಕಂಡು ಮಾತಾಡಲು ಸೆಂಟ್ರಲ್ ಜೈಲಿಗೆ ಬಂದಿದ್ದರು. ಆಚೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಜೈಲಲ್ಲಿ ದರ್ಶನ್ ಬೇಜಾರಲ್ಲಿದ್ದಾರೆ ಇದ್ದಾರೆ, ಮಾಡಿರುವ ಕೆಲಸಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು. ದರ್ಶನ್ ರನ್ನು ಬಾಲ್ಯದಿಂದ ಬಲ್ಲ ಶಿವಕುಮಾರ್, ಗೆಳೆಯನಿಗೆ ಕೊಂಚ ಕೋಪ ಜಾಸ್ತಿ ಆದರೆ ಈ ಕೋಪ ಈ ಮಟ್ಟಕ್ಕೆ ಹೋಗುತ್ತೆ ಅಂತ ಅನ್ಕೊಂಡಿರಲಿಲ್ಲ ಎಂದರು. ಅಂದರೆ ಕೊಲೆ ಮಾಡುವ ಮಟ್ಟಕ್ಕಾ ಅಂತ ಕೇಳಿದರೆ ತಮ್ಮ ಮಾತನ್ನು ತಿದ್ದಿಕೊಳ್ಳುವ ಅವರು, ವಿಷಯ ಕೋರ್ಟ್ ನಲ್ಲಿರುವುದರಿಂದ ಅದರ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಹೇಳಿ ವಿಚಾರಣೆ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ಗಾಗಿ ಬಟ್ಟೆ ಹೊತ್ತು ತಂದ ಅಕ್ಕನ ಮಗ, ಜೈಲಲ್ಲಿ ನಟನ ತೂಕ ಕಮ್ಮಿಯಾಗುತ್ತಿದೆ!