AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಭೇಟಿಯಾಗಿ ದಾವಣಗೆರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ ಸಂಸದ ಜಿಎಂ ಸಿದ್ದೇಶ್ವರ

ಡಿಕೆ ಶಿವಕುಮಾರ್ ಭೇಟಿಯಾಗಿ ದಾವಣಗೆರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ ಸಂಸದ ಜಿಎಂ ಸಿದ್ದೇಶ್ವರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 13, 2023 | 12:47 PM

ದಾವಣಗೆರೆಯಲ್ಲೂ ತೀವ್ರ ಕೊರತೆ ಮಳೆಯ ಕಾರಣ ರೈತರು ಸಂಕಷ್ಟದಲ್ಲಿದ್ದು ಅವರ ಸ್ಥಿತಿಗೆ ಸ್ಪಂದಿಸಬೇಕೆಂದು ಸಿದ್ದೇಶ್ವರ ಆಗ್ರಹಿದರು ಎನ್ನಲಾಗಿದೆ. ಆಫ್ ಮತ್ತು ಆನ್ ಪದ್ಧತಿಯನ್ನು ಕೈಬಿಟ್ಟು ಭದ್ರಾ ಕಾಲುವೆಗೆ ನೀರು ಹರಿಸುವಂತೆಯೂ ಬಿಜೆಪಿ ನಾಯಕರು ಶಿವಕುಮಾರ್ ರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರ ಬಳಿಕ ಬಿಜೆಪಿ ಸಂಸದರೂ ಈಗ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲಾರಂಭಿಸಿದ್ದಾರೆ. ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಇಂದು ಬೆಂಗಳೂರಲ್ಲಿ ಶಿವಕುಮಾರ್ ಅವರನ್ನು ಭೇಟಿಯಾದರು. ಬಿಜೆಪಿ ಶಾಸಕ ಬಿಪಿ ಹರೀಶ್ ಮತ್ತು ಇತರ ಕಾರ್ಯಕರ್ತರೊಂದಿಗೆ ಅವರು ಉಪ ಮುಖ್ಯಮಂತ್ರಿಯನ್ನು ಬೇಟಿಯಾದರು. ಆದರೆ, ಎಲ್ಲದಕ್ಕೂ ರಾಜಕೀಯದ ಬಣ್ಣ ಕಟ್ಟುವ ಅಗತ್ಯವಿಲ್ಲ ಮಾರಾಯ್ರೇ. ಅಸಲಿಗೆ ಸಿದ್ದೇಶ್ವರ ಮತ್ತು ಹರೀಶ್; ದಾವಣಗೆರೆ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಶಿವಕುಮಾರೊಂದಿಗೆ ಚರ್ಚಿಸಲು ಆಗಮಿಸಿದ್ದರು. ದಾವಣಗೆರೆಯಲ್ಲೂ ತೀವ್ರ ಕೊರತೆ ಮಳೆಯ ಕಾರಣ ರೈತರು ಸಂಕಷ್ಟದಲ್ಲಿದ್ದು ಅವರ ಸ್ಥಿತಿಗೆ ಸ್ಪಂದಿಸಬೇಕೆಂದು ಸಿದ್ದೇಶ್ವರ ಆಗ್ರಹಿದರು ಎನ್ನಲಾಗಿದೆ. ಆಫ್ ಮತ್ತು ಆನ್ ಪದ್ಧತಿಯನ್ನು ಕೈಬಿಟ್ಟು ಭದ್ರಾ ಕಾಲುವೆಗೆ ನೀರು ಹರಿಸುವಂತೆಯೂ ಬಿಜೆಪಿ ನಾಯಕರು ಶಿವಕುಮಾರ್ ರನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ