ಅವರೇ ಕಾಳು ಮೇಳದಲ್ಲಿ ಅವರೇ ಕಾಳಿನ ದೋಸೆಯನ್ನು ಅವರೇ ಕಾಳಿನ ಪಲ್ಯದೊಂದಿಗೆ ಸವಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Dec 30, 2024 | 7:45 PM

ತಿಂಡಿಪೋತರಿಗಾಗಿ ಬೆಂಗಳೂರಲ್ಲಿ ಆಹಾರ ಮೇಳಗಳು ನಡೆಯುತ್ತಿರುತ್ತವೆ, ಅವುಗಳ ಕೊರತೆಯೇನೂ ಇಲ್ಲ. ಕಡಲೆಕಾಯಿ ಪರಿಷೆ ನಿಮಗೆ ಗೊತ್ತಲ್ಲ? ಆ ಮೇಳದಲ್ಲೂ ಬಗೆಬಗೆಯ ತಿನಿಸುಗಳು ತಿಂಡಿಪ್ರಿಯರಿಗೆ ಸಿಗುತ್ತವೆ. ಆವರೇ ಮೇಳದಲ್ಲಿ ದೋಸೆಯಲ್ಲದೆ, ಅವರೇ ಮಂಚೂರಿಯನ್, ಅವರೇ ಕಾಳಿನ ಐಸ್ ಕ್ರೀಂ, ಅವರೇ ಕಾಳಿನ ಪಾಯಸ, ಅವರೇ ಕಾಳಿನ ಪಫ್ ಮೊದಲಾದ ತಿಂಡಿಗಳು ಸಿಗುತ್ತಿವೆ.

ಬೆಂಗಳೂರು: ನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅವರೇ ಕಾಳು ಮೇಳ ನಡೆಯುತ್ತಿದೆ ಮತ್ತು ಈ ಬಾರಿಯೂ ವಾಸವಿ ಫುಡ್ಸ್​ನವರು ಮೇಳವನ್ನು ಆಯೋಜಿಸುತ್ತಿದ್ದಾರೆ. ಅಂದಹಾಗೆ, ಇದು 25ನೇ ವರ್ಷದ ಅವರೇ ಮೇಳ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಳದಲ್ಲಿ ಭಾಗವಹಿಸಿದರು ಮತ್ತು ಅವರೇ ಕಾಳಿನ ದೋಸೆಯನ್ನು ಸವಿದರು. ಆವರೇ ಕಾಳಿನಿಂದ ಮಾಡಿದ ವಿವಿಧ ಬಗೆಯ ತಿಂಡಿ ತಿನಿಸುಗಳು ಲಭ್ಯವಿವೆ. ಶಿವಕುಮಾರ್ ದೋಸೆ ತಿನ್ನುವುದರ ಜೊತೆಗೆ ಅವರೇ ಕಾಳನ್ನೂ ಖರೀದಿಸಿದರು ಎಂದು ನಮ್ಮ ಬೆಂಗಳೂರು ವರದಿಗಾರ ಮಾಹಿತಿ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.