ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ

ಸ್ವೀಟ್ಸ್ ತಿನ್ನೋದಾ.. ಸ್ನ್ಯಾಕ್ಸ್ ತಿನ್ನೋದಾ.. ಒಂದಕ್ಕಿಂತ ಒಂದು ಸೂಪರ್ ಟೇಸ್ಟ್.. ನೋಡೋಕೂ ಅಷ್ಟೇ ಸಖತ್ತಾಗಿದೆ.. ಅಷ್ಟಕ್ಕೂ ನಾವು ಯಾವುದರ ಬಗ್ಗೆ ಹೇಳ್ತಿದ್ದೀವಿ ಅಂದ್ರಾ.. ಈ ಸ್ಟೋರಿ ನೋಡಿ..

ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ
| Updated By: ಆಯೇಷಾ ಬಾನು

Updated on: Jan 26, 2022 | 7:54 AM

ಸ್ವೀಟ್ಸ್, ಸ್ನ್ಯಾಕ್ಸ್ ಒಂದಕ್ಕಿಂತ ಒಂದು ಸೂಪರ್.. ಅದ್ರಲ್ಲೂ ಇದನ್ನೆಲ್ಲಾ ಅವರೇಬೇಳೆಯಲ್ಲಿ ಮಾಡಿದ್ದಾರೆ ಅನ್ನೋದು ಮತ್ತೊಂದು ಸ್ಪೆಷಾಲಿಟಿ. ಅವರೆಕಾಯಿ ಸೀಸನ್ ಆಗಿರೋದ್ರಿಂದ ಬೆಂಗಳೂರಿನಲ್ಲಿ ಅವರೆಕಾಯಿ ಮೇಳ ಆಯೋಜನೆ ಮಾಡಿದ್ದು, ರೈತರಿಂದ ನೇರವಾಗಿ ಖರೀದಿ ಮಾಡಿ ಖಾದ್ಯಗಳನ್ನು ತಯಾರಿಸಿದ್ರು. ಅವರೆಕಾಳಿನಿಂದ ಮಾಡಿದ್ದ ಸುಮಾರು 70ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ಮಾಡಿದ್ರು. ಅವರೆಕಾಳು ಮಿಕ್ಸ್ಚರ್, ಅವರೆ ಉಪ್ಪಿಟ್ಟು, ಅವರೆ ದೋಸೆ, ಅವರೆ ನಿಪ್ಪಟ್ಟು, ಅವರೆ ಹಲ್ವಾ, ಅವರೆ ಚಿಕ್ಕಿ, ಅವರೆ ದೋಸೆ, ಅವರೆ ವಡೆ, ಅವರೆ ಜಿಲೇಬಿ, ಅವರೆ ಬೋಂಡ, ಅವರೆ ಹೋಳಿಗೆ ಎಲ್ಲರ ಬಾಯಲ್ಲೂ ನೀರೂರಿಸುತ್ತಿದೆ.

ಕೊವಿಡ್ ಕಾರಣದಿಂದ ಈ ವರ್ಷವೂ ಸಿಂಪಲ್ಲಾಗಿ ಮೇಳ ಆಯೋಜಿಸಲಾಗಿದೆ. ಆದ್ರೂ ಗ್ರಾಹಕರು ಅವರೆಮೇಳಕ್ಕೆ ಬಂದು ಅವರೆಕಾಳುಗಳ ಖಾದ್ಯಗಳನ್ನ ಟೇಸ್ಟ್ ಮಾಡ್ತಿದ್ದಾರೆ. ಡಿಫ್ರೆಂಟ್ ಟೇಸ್ಟ್ಗೆ ಫಿದಾ ಆಗಿ ತಾವೂ ತಿಂದು ತಮ್ಮ ಫ್ಯಾಮಿಲಿಯವ್ರಿಗೂ ಪಾರ್ಸೆಲ್ ತಗೊಂಡು ಹೋಗ್ತಿದ್ದಾರೆ.

ವಿವಿ ಪುರಂನಲ್ಲಿ ನಡೆಯುತ್ತಿರೋ ಅವರೆಕಾಳು ಮೇಳ ಈ ತಿಂಗಳ ಅಂತ್ಯದವರೆಗೂ ಇರಲಿದೆ. ಹೀಗಾಗಿ ಜನ ಮಿಸ್ ಮಾಡಿಕೊಳ್ದೇ ಒಮ್ಮೆ ಟೇಸ್ಟ್ ಮಾಡಿ. ಇಲ್ದಿದ್ರೆ ಮುಂದಿನ ವರ್ಷದತನಕ ಕಾಯ್ಬೇಕಾಗುತ್ತೆ.

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​