ಹಾಸನದ ಅನ್ನಭಾಗ್ಯ ಸ್ಕೀಮ್ ಫಲಾನುಭವಿಗಳಿಗೆ 10 ಕೇಜಿ ಅಕ್ಕಿ ಸಿಗುತ್ತಿದೆ, ಕೆಲವೆಡೆ ಅಕ್ಕಿಯ ಕೊರತೆ

ಅರುಣ್​ ಕುಮಾರ್​ ಬೆಳ್ಳಿ

Updated on: Mar 18, 2025 | 11:20 AM

ಟಿವಿ9ನೊಂದಿಗೆ ಮಾತಾಡಿರುವ ಫಲಾನುಭವಿಗಳು ಹಣದ ಬದಲು ಅಕ್ಕಿ ನೀಡುವುದೇ ಬೆಟರ್ ಎಂದು ಹೇಳುತ್ತಾರೆ. ಅಕ್ಕಿಯ ಕೊರತೆ ಎದುರಾಗುತ್ತಿರುವ ಬಗ್ಗೆ ಒಬ್ಬ ಮಹಿಳೆಯ ಮಾತಿನಿಂದ ಖಚಿತವಾಗುತ್ತದೆ. ಅವರಿಗೆ 60ಕೇಜಿ ಅಕ್ಕಿ ಸಿಗಬೇಕಿತ್ತು ಅದರೆ ಮೊನ್ನೆ 50 ಕೇಜಿ ಮಾತ್ರ ಕೊಟ್ಟಿದ್ದಕ್ಕೆ ಉಳಿದ 10 ಕೇಜಿ ಅಕ್ಕಿ ಪಡೆಯಲು ಅವರು ಸಾಲಲ್ಲಿ ನಿಂತಿದ್ದಾರೆ.

ಹಾಸನ, ಮಾರ್ಚ್ 18: ಕಳೆದ ತಿಂಗಳು ಆಹಾರ ಮತ್ತು ನಾಗರಿಕಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅನ್ನಭಾಗ್ಯ ಸ್ಕೀಮಿನಡಿ ಎಲ್ಲರಿಗೂ ಹತ್ತತ್ತು ಕೇಜಿ ಸಿಗುತ್ತದೆ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಯಾರಾಗಿದೆ ಅಂತ ಹೇಳಿದ್ದರು. ವಾಸ್ತವದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಹತ್ತು ಕೇಜಿ ಅಕ್ಕಿ ಸಿಗುತ್ತಿದೆಯಾ ಅಂತ ನಮ್ಮ ಹಾಸನ ವರದಿಗಾರ ರಿಯಾಲಿಟಿ ಚೆಕ್ ಮಾಡಿದ್ದಾರೆ. ಅವರೊಂದಿಗೆ ಮಾತಾಡಿರುವ ಫಲಾನುಭವಿಗಳು, ಹತ್ತತ್ತು ಕೇಜಿ ಅಕ್ಕಿ ಸಿಗುತ್ತಿದೆ, ಕಳೆದ ತಿಂಗಳಿನ 5 ಕೇಜಿ ಸೇರಿ ಮಾರ್ಚ್​ನಲ್ಲಿ 15 ಕೇಜಿ ಅಕ್ಕಿ ಕೊಡುತ್ತಿದ್ದಾರೆ ಅಂತ ಹೇಳುತ್ತಾರೆ, ಅಂದರೆ ಕುಟುಂಬವೊಂದರಲ್ಲಿ 4 ಸದಸ್ಯರಿದ್ದರೆ 60 ಕೇಜಿ ಅಕ್ಕಿ ಸಿಗುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅನ್ನಭಾಗ್ಯ ಯೋಜನೆ: ಕಲಬುರಗಿ ಮಹಿಳೆ ಹೇಳುವುದನ್ನು ಕೇಳಿದರೆ ಸಚಿವ ಮುನಿಯಪ್ಪ ಹೇಳಿದ್ದು ಸುಳ್ಳು ಅನಿಸುತ್ತದೆ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.