ಯೋಗೇಶ್ವರ್ ಹಠವನ್ನು ಜೆಡಿಎಸ್ ಬಹಳಷ್ಟು ಸಹಿಸಿಕೊಂಡಿತು: ನಿಖಿಲ್ ಕುಮಾರಸ್ವಾಮಿ

|

Updated on: Oct 21, 2024 | 8:06 PM

ಯೋಗೇಶ್ವರ್ ಅವರನ್ನು ಕಡೆಗಣಿಸುವ ಪ್ರಯತ್ನ ಜೆಡಿಎಸ್ ಪಕ್ಷದಿಂದ ಯಾವತ್ತೂ ಆಗಿಲ್ಲ, ಅದು ನಿಜವೇ ಆಗಿದ್ದರೆ ಬೆಂಗಳೂರು ನಗರದ ಖ್ಯಾತ ಹೋಟೆಲ್ ನಲ್ಲಿ ಅವರನ್ನೊಳಗೊಂಡ ಸಭೆ ನಡೆಸುವ ಅನಿವಾರ್ಯತೆ ಜೆಡಿಎಸ್ ಪಕ್ಷದ ಮುಖಂಡರಿಗೆ ಇರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಸಿಪಿ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ನೀಡಿದ ಆಘಾತಗಳನ್ನೆಲ್ಲ ಸಹಿಸಿಕೊಂಡು ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುವ ಪ್ರಯತ್ನಿಸುವ ನಿರ್ಧಾರವನ್ನು ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಾಡಿದಾಗ್ಯೂ ಅವರು ತಮ್ಮ ಹಠವನ್ನೇ ಸಾಧಿಸಿದರೆ ಜೆಡಿಎಸ್ ಪಕ್ಷದವರು ಎಷ್ಟೂಂತ ಸಹಿಸಿಕೊಳ್ಳುವುದು ಸಾಧ್ಯ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ನಿಖಿಲ್ ಹಿಂಜರಿಯುತ್ತಿರುವುದೇಕೆ?ಇಲ್ಲಿವೆ ಪ್ರಮುಖ ಕಾರಣಗಳು

Follow us on