Independence Day
ಸ್ವಾತಂತ್ರ್ಯ ದಿನಾಚರಣೆ: ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತವು ಆಗಸ್ಟ್ 15, 1947ರಲ್ಲಿ ಸ್ವಾತಂತ್ರವನ್ನು ಕಂಡಿತು. ಪ್ರಮುಖ ಸಮಾರಂಭವು ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ಆರಂಭದೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಪ್ರಧಾನಿ ಭಾಷಣ ಮಾಡುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗುತ್ತವೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕಾಗಿ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ. ಜೂನ್ 3, 1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ಬ್ಯಾಟನ್, ಬ್ರಿಟಿಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದ್ದರು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದು ಮಧ್ಯರಾತ್ರಿ ಜವಾಹರ್ಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟವನ್ನು ಹಾರಿಸುವ ಪದ್ದತಿ ಜಾರಿಯಲ್ಲಿದೆ. ಸಂಜೆಯ ವೇಳೆ ಗಾಳಿಪಟಗಳು ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸ ಎಲ್ಲೆಲ್ಲೂ ಮೊಳಗುತ್ತವೆ
ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಭಾಷಣದಲ್ಲಿ ಆರ್ಎಸ್ಎಸ್ ಉಲ್ಲೇಖ; ಸಂಘದ ಪರ-ವಿರೋಧ ಚರ್ಚೆಯ ಮತ್ತೊಂದು ಮಗ್ಗುಲು
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಬಗ್ಗೆ ಉಲ್ಲೇಖಿಸಿದ್ದರಿಂದ ಇದೀಗ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಪಾತ್ರ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘವು ಪಾಲ್ಗೊಂಡಿತ್ತೇ, ಇಲ್ಲವೇ? ಈ ಸಂಬಂಧದ ಒಟ್ಟಾರೆ ಬೆಳವಣಿಗೆಯ ಬಗ್ಗೆ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ಮಾಹಿತಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.
- Web contact
- Updated on: Aug 19, 2025
- 11:05 am
RSS ಭಾರತ ದೇಶದ ತಾಲಿಬಾನ್: ವಿವಾದದ ಕಿಡಿಹೊತ್ತಿಸಿದ ಕೈ ಹಿರಿಯ ನಾಯಕ ಬಿಕೆ ಹರಿಪ್ರಸಾದ್
ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಆರ್ಎಸ್ಎಸ್ ಅನ್ನು ಶ್ಲಾಘಿಸಿದ್ದಾರೆ. 103 ನಿಮಿಷ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಆರ್ಎಸ್ಎಸ್ ಬಗ್ಗೆ ಮಾತನಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇತ್ತ ಮೋದಿ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಟೀಕಿಸುವ ಭರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್) ಭಾರತದ ತಾಲಿಬಾನ್ ಎಂದಿದ್ದಾರೆ.
- Ramesh B Jawalagera
- Updated on: Aug 17, 2025
- 3:47 pm
ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಪ್ರಗತಿ ಕಂಡಿದೆ: ಪದ್ಮಭೂಷಣ ಎ. ಸೂರ್ಯ ಪ್ರಕಾಶ್
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ, ಪದ್ಮಭೂಷಣ ಡಾ. ಎ. ಸೂರ್ಯ ಪ್ರಕಾಶ್ ಅವರು ಭಾರತದ ಏಳು ದಶಕಗಳ ಅಭೂತಪೂರ್ವ ಪ್ರಗತಿಯನ್ನು ಸ್ಮರಿಸಿದರು. ಬೆಂಗಳೂರಿನ ಬೆಳವಣಿಗೆಯನ್ನು ಶ್ಲಾಘಿಸಿದರು. ಪ್ರೆಸಿಡೆನ್ಸಿ ಗ್ರೂಪ್ನ ಕುಲಪತಿ ಮತ್ತು ಅಧ್ಯಕ್ಷ ಡಾ. ನಿಸ್ಸಾರ್ ಅಹ್ಮದ್ ಅವರ ಕೊಡುಗೆಯನ್ನು ಕೊಂಡಾಡಿದರು. ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿಯ ಮಹತ್ವವನ್ನು ಒತ್ತಿ ಹೇಳಿದರು.
- Vivek Biradar
- Updated on: Aug 15, 2025
- 8:39 pm
Digital India: ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಎಷ್ಟು ಬೆಳವಣಿಗೆ ಸಾಧಿಸಿದೆ? ಇಲ್ಲಿದೆ ಕೆಲ ಹೈಲೈಟ್ಸ್
Empowering Governance through Digital Infrastructure: ಭಾರತದ ಡಿಜಿಟಲ್ ಆರ್ಥಿಕತೆ ಅಗಾಧವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಆದಾಯದ ಶೇ. 11.74ರಷ್ಟು ಕೊಡುಗೆ ಡಿಜಿಟಲ್ ಆರ್ಥಿಕತೆಯಿಂದ ಆಗುತ್ತಿದೆ. ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಭಾರತ ಪ್ರಮುಖ ಆಟಗಾರನಾಗಿದೆ. ಹತ್ತು ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳ ಮ್ಯಾನುಫ್ಯಾಕ್ಚರಿಂಗ್ 1.9 ಲಕ್ಷ ಕೋಟಿ ರೂನಿಂದ 11.3 ಲಕ್ಷ ಕೋಟಿ ರೂಗೆ ಹೆಚ್ಚಿದೆ.
- Vijaya Sarathy SN
- Updated on: Aug 15, 2025
- 6:36 pm
‘ನನ್ನ ದೇಶ, ನನ್ನ ಗುರುತು’; 79ನೇ ಸ್ವಾತಂತ್ರ್ಯ ದಿನದ ಬಗ್ಗೆ ಭಾರತೀಯ ಕ್ರಿಕೆಟಿಗರು ಏನು ಹೇಳಿದ್ರು?
Team India Celebrates 79th Independence Day: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಗೌತಮ್ ಗಂಭೀರ್, ಶುಭ್ಮನ್ ಗಿಲ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ತ್ರಿವರ್ಣ ಧ್ವಜ, ದೇಶಭಕ್ತಿಯ ಸಂದೇಶಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಪೋಸ್ಟ್ಗಳು ಹಂಚಿಕೊಳ್ಳಲಾಗಿದೆ. ಬಿಸಿಸಿಐ ಕೂಡ ಶುಭಾಶಯಗಳನ್ನು ಕೋರಿದೆ.
- pruthvi Shankar
- Updated on: Aug 15, 2025
- 6:29 pm
79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು
ನವದೆಹಲಿ, ಆಗಸ್ಟ್ 15: ಭಾರತದ 79ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ದೇಶದ ಅಭ್ಯುದಯಕ್ಕೆ ಪೂರಕವಾಗಬಹುದಾದ ಕೆಲ ಸಲಹೆಗಳನ್ನು ನೀಡಿದ್ದಾರೆ. ಶಿಕ್ಷಣ, ಕೈಗಾರಿಕೆ, ತಂತ್ರಜ್ಞಾನ, ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕರೆ ನೀಡಿದ್ದಾರೆ. ಇದು ಉದಾರೀಕರಣಗೊಳಿಸುವುದಷ್ಟೇ ಅಲ್ಲ, ಮುಕ್ತಗೊಳಿಸುವ ಸಮಯ ಹೌದು ಎಂದಿದ್ದಾರೆ. ಅವರ ಸಂದೇಶಗಳ ಮುಖ್ಯಾಂಶಗಳು ಇಲ್ಲಿವೆ...
- Vijaya Sarathy SN
- Updated on: Aug 15, 2025
- 6:03 pm
ಮಹಾನ್ ಬ್ಯುಸಿನೆಸ್ಮ್ಯಾನ್ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!
Know how British killed Indian businesses: ಭಾರತದಲ್ಲಿ ಯಾಕೆ ವಿಶ್ವಶ್ರೇಷ್ಠ ಉದ್ಯಮಗಳು ಸೃಷ್ಟಿಯಾಗಿಲ್ಲ? ಅಂಬಾನಿ, ಅದಾನಿ, ಟಾಟಾ, ಬಿರ್ಲಾರಂತಹ ಉದ್ಯಮಿಗಳ ಸಂಖ್ಯೆ ಯಾಕೆ ದೊಡ್ಡದಿಲ್ಲ? ಎಂದು ಕೇಳುವವರಿದ್ದಾರೆ. ಆದರೆ, ಇತಿಹಾಸಕಾರರ ಪ್ರಕಾರ ಬ್ರಿಟಿಷರು ಬರುವ ಮುನ್ನ ಭಾರತ ಉದ್ಯಮಿಗಳ ಸ್ವರ್ಗವಾಗಿತ್ತು. ಬ್ರಿಟಿಷರು ಹಂತಹಂತವಾಗಿ ಅವರನ್ನು ಮುಗಿಸಿದರು.
- Vijaya Sarathy SN
- Updated on: Aug 15, 2025
- 4:19 pm
ಆಪರೇಷನ್ ಸಿಂದೂರ್ನಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದವರೆಗೆ, ಭಾರತದ ಶಕ್ತಿ ಸಾಮರ್ಥ್ಯ, ಗುರಿ ತೆರೆದಿಟ್ಟ ಪ್ರಧಾನಿ
PM Narendra Modi's independence day speech: ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದಾರೆ. 2047ರೊಳಗೆ ವಿಕಸಿತ ಭಾರತದ ನಿರ್ಮಾಣದ ಗುರಿಯಲ್ಲಿ ಪ್ರಮುಖ ಭಾಗವಾಗಿರುವ ಆತ್ಮನಿರ್ಭರ್ ಭಾರತದ ಮಾತನಾಡಿದ್ದಾರೆ. ರಕ್ಷಣೆ, ಬಾಹ್ಯಾಕಾಶ, ಸೆಮಿಕಂಡಕ್ಟರ್, ನವೀಕರಣ ಇಂಧನ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಭಾರತ ತೋರಿರುವ ಪ್ರಗತಿಯನ್ನು ವಿವರಿಸಿದ್ದಾರೆ.
- Vijaya Sarathy SN
- Updated on: Aug 15, 2025
- 1:29 pm
ಬೆಂಗಳೂರಿನಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ: ಇಲ್ಲಿವೆ ಫೋಟೋಸ್
ರಾಜ್ಯದಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಬಿಜೆಪಿ ರಾಜ್ಯ ಕಚೇರಿಯಲ್ಲಿಯೂ ಧ್ವಜಾರೋಹಣ ನಡೆಯಿತು. ಇದರ ಫೋಟೋಸ್ ಇಲ್ಲಿವೆ.
- Gangadhar Saboji
- Updated on: Aug 15, 2025
- 12:48 pm
ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ
Narendra Modi speech during Independence day celebrations: ಆರ್ಥಿಕ ಸ್ವಾರ್ಥ ಹೆಚ್ಚುತ್ತಿದೆ. ಬೇರೆ ದೇಶದ ಬಗ್ಗೆ ಚಿಂತೆ ಪಡುವ ಬದಲು ನಮ್ಮ ಗುರಿಯತ್ತ ಸಾಗೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನೋತ್ಸವ ಭಾಷಣ ಮಾಡಿದ ಪ್ರಧಾನಿಗಳು, ಅಮೆರಿಕವನ್ನು ಪರೋಕ್ಷವಾಗಿ ಕುಟುಕಿದ್ದಾರೆ. ಕಡಿಮೆ ಬೆಲೆ, ಉತ್ತಮ ಗುಣಮಟ್ಟದೊಂದಿಗೆ ಭಾರತದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಲಿ ಎಂದು ಕರೆ ನೀಡಿದ್ದಾರೆ ಮೋದಿ.
- Vijaya Sarathy SN
- Updated on: Aug 15, 2025
- 12:05 pm