ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್

|

Updated on: Oct 13, 2024 | 6:21 PM

ಹಂಸಾ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಮೊದಲ ಕ್ಯಾಪ್ಟನ್​ ಆಗಿದ್ದರು. ಅವರ ಬಗ್ಗೆ ಕಿಚ್ಚ ಸುದೀಪ್​ ಎದುರು ಧನರಾಜ್​ ಮಾತನಾಡಿದ್ದಾರೆ. ಅಲ್ಲದೇ ಜಗದೀಶ್​ ಬಗ್ಗೆಯೂ ಧನರಾಜ್ ಕೆಲವು ವಿಚಾರ ಪ್ರಸ್ತಾಪಿಸಿದ್ದಾರೆ. ಕಾಮಿಡಿ ಮೂಲಕವೇ ಎಲ್ಲರನ್ನೂ ಸೆಳೆದುಕೊಳ್ಳುವ ಧನರಾಜ್​ ಅವರ ಮಾತು ಕೇಳಿ ಸುದೀಪ್​ ಬಿದ್ದುಬಿದ್ದು ನಕ್ಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಹಂಸಾ ಅವರ ಕ್ಯಾಪ್ಟೆನ್ಸಿ ಹೇಗಿತ್ತು ಮತ್ತು ಅದರಿಂದ ಏನೆಲ್ಲ ಕಲಿಯಬೇಕು ಎಂಬುದನ್ನು ಧನರಾಜ್​ ಹೇಳಿದ್ದಾರೆ. ‘ಹಂಸಾ ಅವರು ಸ್ಟ್ರಾಂಗ್​ ಆಗಿ ಇರಬೇಕು. ಹೆದರಬಾರದು’ ಎಂದು ಧನರಾಜ್​ ಸಲಹೆ ನೀಡಿದ್ದಾರೆ. ‘ಒಂದು ವೇಳೆ ಜಗದೀಶ್​ ಕ್ಯಾಪ್ಟನ್​ ಆದರೆ ಮನೆ ಹೇಗಿರುತ್ತದೆ’ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ‘ರೂಲ್ಸ್​ ಬ್ರೇಕ್​ ಮಾಡುವವರೇ ಕ್ಯಾಪ್ಟನ್​ ಆದರೆ ಎಲ್ಲರೂ ಮಲಗಿಸ್ತಾರೆ’ ಎಂದಿದ್ದಾರೆ ಧನರಾಜ್​. ಈ ಮಾತಿನಿಂದ ನಿರೂಪಕ ಸುದೀಪ್​ ಹಾಗೂ ಬಿಗ್​ ಬಾಸ್​ ಮನೆಯ ಎಲ್ಲ ಸದಸ್ಯರಿಗೆ ನಗು ಬಂದಿದೆ. ಅ.13ರ ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on