ಕುಮಾರಸ್ವಾಮಿ ಮಾಡಿರುವ ಕಾಮೆಂಟ್​ಗೆ ಉತ್ತರಿಸುವ ಗೋಜಿಗೆ ಶಿವಕುಮಾರ್ ಹೋಗಲಿಲ್ಲ

|

Updated on: Oct 11, 2024 | 5:49 PM

ಜಾತಿಗಣತಿ ಬಗ್ಗೆ ಬಿಜೆಪಿ ಹೇಳಿರುವುದಕ್ಕೂ ಶಿವಕುಮಾರ್ ಸ್ಪಷ್ಟವಾದ ಉತ್ತರ ಅಥವಾ ತಮ್ಮ ಸರ್ಕಾರದ ನಿಲುವನ್ನ ಹೇಳಲಿಲ್ಲ. ಮೊದಲು ತಮ್ಮ ನಿಲುವು ಏನೆಂದು ಬಿಜೆಪಿಯವರು ತಿಳಿಸಲಿ, ಆಮೇಲೆ ಸರ್ಕಾರದ ನಿಲುವನ್ನು ಪ್ರಕಟಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮಡಿಕೇರಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿಯವರ ಕಾಮೆಂಟ್​ಗೆ ಉತ್ತರಿಸಲಿಲ್ಲ. ಸರ್ಕಾರವನ್ನು ಬೇರೆ ಯಾರೂ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ, ಕಾಂಗ್ರೆಸ್ ನಾಯಕರೇ ಆ ಕಾರ್ಯದಲ್ಲಿ ತೊಡಗಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆಂದು ಶಿವಕುಮಾರ್​ಗೆ ತಿಳಿಸಿದಾಗ, ಕುಮಾರಸ್ವಾಮಿ ಮಾತಿಗೆ ಮತ್ತೊಂದು ದಿನ ಉತ್ತರಿಸುವೆ, ದುಷ್ಟರನ್ನು ಮತ್ತು ದುಃಖವನ್ನು ದೂರ ಮಾಡುವ ದುರ್ಗಾದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಅನ್ನುತ್ತಾ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೋವಿಡ್ ಹಗರಣ: ಹೆಚ್ಚಿನ ‌ಕ್ರಮ ಕೈಗೊಳ್ಳಲು ಡಿಕೆ ಶಿವಕುಮಾರ್​ ನೇತೃತ್ವದ ಉಪ ಸಮಿತಿ ರಚನೆ  

Follow us on