ಕುಮಾರಸ್ವಾಮಿ ಮಾಡಿರುವ ಕಾಮೆಂಟ್ಗೆ ಉತ್ತರಿಸುವ ಗೋಜಿಗೆ ಶಿವಕುಮಾರ್ ಹೋಗಲಿಲ್ಲ
ಜಾತಿಗಣತಿ ಬಗ್ಗೆ ಬಿಜೆಪಿ ಹೇಳಿರುವುದಕ್ಕೂ ಶಿವಕುಮಾರ್ ಸ್ಪಷ್ಟವಾದ ಉತ್ತರ ಅಥವಾ ತಮ್ಮ ಸರ್ಕಾರದ ನಿಲುವನ್ನ ಹೇಳಲಿಲ್ಲ. ಮೊದಲು ತಮ್ಮ ನಿಲುವು ಏನೆಂದು ಬಿಜೆಪಿಯವರು ತಿಳಿಸಲಿ, ಆಮೇಲೆ ಸರ್ಕಾರದ ನಿಲುವನ್ನು ಪ್ರಕಟಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮಡಿಕೇರಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿಯವರ ಕಾಮೆಂಟ್ಗೆ ಉತ್ತರಿಸಲಿಲ್ಲ. ಸರ್ಕಾರವನ್ನು ಬೇರೆ ಯಾರೂ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ, ಕಾಂಗ್ರೆಸ್ ನಾಯಕರೇ ಆ ಕಾರ್ಯದಲ್ಲಿ ತೊಡಗಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆಂದು ಶಿವಕುಮಾರ್ಗೆ ತಿಳಿಸಿದಾಗ, ಕುಮಾರಸ್ವಾಮಿ ಮಾತಿಗೆ ಮತ್ತೊಂದು ದಿನ ಉತ್ತರಿಸುವೆ, ದುಷ್ಟರನ್ನು ಮತ್ತು ದುಃಖವನ್ನು ದೂರ ಮಾಡುವ ದುರ್ಗಾದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಅನ್ನುತ್ತಾ ಅಲ್ಲಿಂದ ಹೊರಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೋವಿಡ್ ಹಗರಣ: ಹೆಚ್ಚಿನ ಕ್ರಮ ಕೈಗೊಳ್ಳಲು ಡಿಕೆ ಶಿವಕುಮಾರ್ ನೇತೃತ್ವದ ಉಪ ಸಮಿತಿ ರಚನೆ
Loading...
Unable to load recommendations.
Follow Us