ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಬಗೆಬಗೆಯ ಮೀನುಗಳನ್ನು, ಮುಟ್ಟಿ ಆನಂದಿಸಿದ ಡಿಕೆ ಶಿವಕುಮಾರ್
ತಿಯೊಂದು ಬಗೆಯ ಮೀನಿನ ಹೆಸರು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡಿದರು. ಒಂದು ಏಡಿಯನ್ನು ಕೈಯಲ್ಲಿ ಹಿಡಿದು ನೋಡಿದ ಬಳಿಕ ಮೀನೊಂದರ ಹೊಟ್ಟೆಭಾಗವನ್ನು ಒತ್ತಿದರು. ಅದಾದ ಮೇಲೆ ಭಾರಿ ಗಾತ್ರದ ಮೀನೊಂದನ್ನು ಎತ್ತಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡಿದರು.
ಬೆಂಗಳೂರು: ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ವಿಶ್ವ ಮೀನುಗಾರಿಕೆ ದಿನ (World Fisheries Day) ಅಂಗವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಮತ್ತು ಮೀನಗಾರಿಕಾ ಸಚಿವ ಮಂಕಾಳೆ ವೈದ್ಯ (Mankala Vaidya) ಭಾಗವಹಿಸಿದ್ದರು. ನಂತರ ವಿಧಾನ ಸೌಧ ಆವರಣದಲ್ಲಿ ಮೊಗವೀರ ಸಮುದಾಯದ ಸದಸ್ಯರಿಗೆ ಪರಿಸರ ಸ್ನೇಹಿ ಮತ್ಸ್ಯವಾಹಿನಿ ಹೆಸರಿನ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಕುಮಾರ ಇದೇ ಅವರಣದಲ್ಲಿ ಹಾಕಲಾಗಿದ್ದ ಮೀನುಗಳ ಸ್ಟಾಲ್ ಗಳಲ್ಲಿನ ಬಗೆಬಗೆಯ ಮೀನುಗಳನ್ನು ನೋಡಿ ಆನಂದಿಸಿದರು. ಪ್ರತಿಯೊಂದು ಬಗೆಯ ಮೀನಿನ ಹೆಸರು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಶಿವಕುಮಾರ್ ಮಾಡಿದರು. ಒಂದು ಏಡಿಯನ್ನು ಕೈಯಲ್ಲಿ ಹಿಡಿದು ನೋಡಿದ ಬಳಿಕ ಮೀನೊಂದರ ಹೊಟ್ಟೆಭಾಗವನ್ನು ಒತ್ತಿದರು. ಅದಾದ ಮೇಲೆ ಭಾರಿ ಗಾತ್ರದ ಮೀನೊಂದನ್ನು ಎತ್ತಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ

ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ

ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
