ನಿರಪರಾಧಿ ಅಂತ ಸಾಬೀತಾಗುವವರೆಗೆ ಶಿವಕುಮಾರ್ ಸಂಪುಟದಲ್ಲಿರಬಾರದು: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ

Updated on: Oct 20, 2023 | 12:14 PM

ಹೈಕೋರ್ಟ್ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಹೇಳಿರುವುದರಿಂದ ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರಬರಬೇಕು, ನಿರಪರಾಧಿ ಅಂತ ಸಾಬೀತಾದರೆ ಮೂರು ತಿಂಗಳು ನಂತರ ಪುನಃ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದರು.

ರಾಯಚೂರು: ಬಿಜೆಪಿ ಉದ್ದೇಶಪೂರ್ವಕವಾಗ ತನಿಖಾ ಏಜೆನ್ಸಿಗಳನ್ನು ತನ್ನ ಹಿಂದೆ ಛೂ ಬಿಡುತ್ತಿದೆ ಎಂದು ಉಪ ಮುಖ್ಮಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದನ್ನು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಲೇವಡಿ ಮಾಡಿದರು. ಅದು ಶಿವಕುಮಾರ್ ತಂತ್ರಗಾರಿಕೆ ಮಾತ್ರ; ಬೇರೆಯವರ ಮೇಲೆ ಆರೋಪ ಬಂದಾಗ ಅವರು ಅಪರಾಧಿಗಳು ತನ್ನ ಮೇಲೆ ಬಂದಾಗ ಅದು ರಾಜಕಾರಣ ಅಂತ ಅವರು ಹೇಳುತ್ತಾರೆ. ಐಟಿ ದಾಳಿ (IT raids) ವೇಳೆ ಶಿವಕುಮಾರ್ ಮನೆಯಲ್ಲಿ ಕಂತೆ ಕಂತೆ ಅಕ್ರಮ ಹಣ, ಬಾಕ್ಸ್ ಗಟ್ಟಲೆ ದಾಖಲೆ ಪತ್ರಗಳ ದೃಶ್ಯಗಳನ್ನು ಮಾಧ್ಯಮಗಳು ಬಿತ್ತರಿಸಿದ್ದು ಕನ್ನಡಿಗರೆಲ್ಲ ನೋಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಮೊದಲ ವಿಚಾರಣೆಯಲ್ಲೇ ಅವರು ತಪ್ಪಿತಸ್ಥ ಅಂತ ಸಾಬೀತಾಗಿ ಜೈಲಿಗೆ ಕಳಿಸಲಾಯಿತು. ಜಾಮೀನು ಪಡೆದು ಜೈಲಿಂದ ಹೊರಬಂದ ಬಳಿಕ ನಾನು ಸಾಚಾ, ತಪ್ಪು ಮಾಡಿಲ್ಲ, ಟಾರ್ಗೆಟ್ ಮಾಡಲಾಗುತ್ತಿದೆ ಅಂದರೆ ಹೇಗೆ? ಎಂದು ಈಶ್ವರಪ್ಪ ಹೇಳಿದರು. ಹೈಕೋರ್ಟ್ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಹೇಳಿರುವುದರಿಂದ ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರಬರಬೇಕು, ನಿರಪರಾಧಿ ಅಂತ ಸಾಬೀತಾದರೆ ಮೂರು ತಿಂಗಳು ನಂತರ ಪುನಃ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.