ಥೀಯೆಟರ್ ಕ್ಲೋಸ್ ಮಾಡೋ ಮುನ್ನ ಕಾಲಾವಕಾಶ ಕೊಡಿ- ನಿರ್ದೇಶಕ ವಿಜಯಾನಂದ್
ಕೊರೊನಾ ಹೆಚ್ಚಾಗ್ತಿರುವ ಕಾರಣ ಮತ್ತೆ ಲಾಕ್ ಡೌನ್ಗೆ ಸರ್ಕಾರ ಮುಂದಾಗಿದೆ. ಹೀಗಾಗಿ ಚಿತ್ರಮಂದಿರ ಕ್ಲೋಸ್ ಮಾಡೋ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕೃಷ್ಣ ಟಾಕೀಸ್ ನಿರ್ದೇಶಕ ವಿಜಯಾನಂದ್. ಕೃಷ್ಟ ಟಾಕೀಸ್ ಸಿನಿಮಾ ತೆರೆಗೆ ಬಂದಿದ್ದು ಚಿತ್ರಮಂದಿರ ಕ್ಲೋಸ್ ಮಾಡೋದು ಈಗ ಸೂಕ್ತವಲ್ಲ. ಕನಿಷ್ಠ ಒಂದು ತಿಂಗಳಾದ್ರೂ ನಮಗೆ ಸಮಯ ಬೇಕು 50% ಆಕ್ಯೂಪೆನ್ಸಿ ನಲ್ಲಿನೇ ಎಷ್ಟು ಜನ ಬರ್ತಾರೋ ಬರಲಿ, ಟೈಂ ಕೊಡದೇ ಕ್ಲೋಸ್ ಮಾಡಿದ್ರೆ, ನಮ್ಮ ಶ್ರಮ ವ್ಯರ್ಥವಾಗುತ್ತೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Follow Us
Latest Videos