Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ ಇಲ್ಲದೆ ರಾಕ್ಷಸರಾದ ಮನೆ ಮಂದಿ; ಪ್ರತಾಪ್​ ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ?

ಊಟ ಇಲ್ಲದೆ ರಾಕ್ಷಸರಾದ ಮನೆ ಮಂದಿ; ಪ್ರತಾಪ್​ ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ?

ರಾಜೇಶ್ ದುಗ್ಗುಮನೆ
|

Updated on: Dec 15, 2023 | 8:58 AM

ಡ್ರೋನ್ ಪ್ರತಾಪ್ ಅವರು ಎಲ್ಲರಿಗೂ ಮುದ್ದೆ  ಮಾಡಿಕೊಟ್ಟಿದ್ದಾರೆ. ಬಹುಶಃ ಇದಕ್ಕೆ ಗ್ಯಾಸ್ ಅತಿಯಾಗಿ ಬಳಕೆ ಆಗಿದೆ ಅನಿಸುತ್ತದೆ. ಹೀಗಾಗಿ, ಸಂಜೆ ಅಡುಗೆ ಮಾಡೋಕೆ ಬಿಗ್ ಬಾಸ್ ಗ್ಯಾಸ್ ಬಿಟ್ಟಿಲ್ಲ.

ಬಿಗ್ ಬಾಸ್​ನಲ್ಲಿ ಊಟಕ್ಕೆ ಇತಿಮಿತಿ ಇರುತ್ತದೆ. ಅಲ್ಲಿ ಅತಿಯಾಗಿ ತಿನ್ನೋಕೆ ಆಗುವುದಿಲ್ಲ. ಸಿಕ್ಕಿದ್ದರಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಬಾಯಿ ಚಪಲವನ್ನು ಕಟ್ಟಿ ಹಾಕಿಕೊಳ್ಳಬೇಕು. ಈಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಮುದ್ದೆ ತಿನ್ನಬೇಕು ಎನಿಸಿದೆ. ಡ್ರೋನ್ ಪ್ರತಾಪ್ (Drone Prathap) ಅವರು ಎಲ್ಲರಿಗೂ ಮುದ್ದೆ  ಮಾಡಿಕೊಟ್ಟಿದ್ದಾರೆ. ಬಹುಶಃ ಇದಕ್ಕೆ ಗ್ಯಾಸ್ ಅತಿಯಾಗಿ ಬಳಕೆ ಆಗಿದೆ ಅನಿಸುತ್ತದೆ. ಹೀಗಾಗಿ, ಸಂಜೆ ಅಡುಗೆ ಮಾಡೋಕೆ ಬಿಗ್ ಬಾಸ್ ಗ್ಯಾಸ್ ಬಿಟ್ಟಿಲ್ಲ. ಇದರಿಂದ ಮನೆಯವರು ಸಿಟ್ಟಾಗಿದ್ದಾರೆ. ‘ಎಲ್ಲರೂ ರಾಕ್ಷಸರಾಗುತ್ತಿದ್ದಾರೆ. ಗ್ಯಾಸ್ ಕೊಡಿ’ ಎಂದು ಸಂತೋಷ್, ಪ್ರತಾಪ್ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ