ವಿಜಯಪುರ: ಕೃಷಿ ಚಟುವಟಿಕೆಗೆ ಮಹೀಂದ್ರಾ ಕೆಯುವಿ100 ಕಾರ್ ಬಳಸಿದ ರೈತ; ವಿಡಿಯೋ ನೋಡಿ

| Updated By: preethi shettigar

Updated on: Dec 22, 2021 | 9:59 AM

ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ನೋಡಿದ್ದ ರೈತ‌ ಮುತ್ತಣ್ಣ, ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ.

ವಿಜಯಪುರ: ಕೂಲಿಕಾರರ ಸಮಸ್ಯೆಯಿಂದ ಅಜವಾನ ರಾಶಿ ಮಾಡಲು ರೈತ ಮಹೀಂದ್ರಾ ಕೆಯುವಿ100 ಕಾರ್ ಬಳಕೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ‌ ಶಿರೂರ ಗ್ರಾಮದಲ್ಲಿ ನಡೆದಿದೆ. ಅಜವಾನ ಫಸಲಿನ ರಾಶಿ ಮಾಡಲು ಕೂಲಿಕಾರರು ಸಿಗದ ಕಾರಣ ರೈತ ಮುತ್ತಣ್ಣ ಪ್ಯಾಟಿಗೌಡರ ಕಾರ್ ಬಳಸಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು‌ ರೈತ ಮುತ್ತಣ್ಣ ಪ್ಯಾಟಿಗೌಡರ ಹೇಳಿಕೆ ನೀಡಿದ್ದಾರೆ. ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ನೋಡಿದ್ದ ರೈತ‌ ಮುತ್ತಣ್ಣ, ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:
ಮಂಡಿಯ ಹೊರಗೆ 150 ಕೆಜಿ ಬೆಳ್ಳುಳ್ಳಿ ಸುಟ್ಟ ರೈತ; ಸುತ್ತಲೂ ನಿಂತು ದೇಶಭಕ್ತಿ ಸೂಚಕ ಘೋಷಣೆ ಕೂಗಿದ ಬೆಳೆಗಾರರು

ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಧಾರವಾಡ ಕೃಷಿ ವಿವಿ ಮಹಿಳೆಯರನ್ನ ಸಶಕ್ತರನ್ನಾಗಿಸಿದ್ದು ಹೇಗೆ?

Published On - 9:57 am, Wed, 22 December 21

Follow us on