ವರ್ತೂರು ಸಂತೋಷ್ ತಾನು ಹಳ್ಳಿಕಾರ್ ಒಡೆಯ ಅಂದಿದಕ್ಕೆ ಹಳ್ಳಿಕಾರ್ ತಳಿ ಹೊಂದಿರುವ ಇತರ ರೈತರು ವ್ಯಗ್ರ, ಕಾನೂನು ಸಮರಕ್ಕೆ ಸಿದ್ಧತೆ!

ಸಂತೋಷ್ ಹೇಳಿಕೆಯಿಂದಾಗಿ ಹಳ್ಳಿಕಾರ್ ತಳಿ ಮತ್ತು ಅವುಗಳನ್ನು ಸಾಕುತ್ತಿರುವ ಅನೇಕ ರೈತರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರೊಬ್ಬರು ಟಿವಿ9ಗೆ ತಿಳಿಸಿದ್ದಾರೆ.

ವರ್ತೂರು ಸಂತೋಷ್ ತಾನು ಹಳ್ಳಿಕಾರ್ ಒಡೆಯ ಅಂದಿದಕ್ಕೆ ಹಳ್ಳಿಕಾರ್ ತಳಿ ಹೊಂದಿರುವ ಇತರ ರೈತರು ವ್ಯಗ್ರ, ಕಾನೂನು ಸಮರಕ್ಕೆ ಸಿದ್ಧತೆ!
|

Updated on: Feb 24, 2024 | 11:27 AM

ಮಂಡ್ಯ: ಪ್ರಸ್ತುತವಾಗಿ ರಾಜ್ಯದ ದೊಡ್ಡ ಸೆಲಿಬ್ರಿಟಿ ಅಂದರೆ ವರ್ತೂರು ಸಂತೋಷ್ (Varhuru Santosh) ಇರಬಹುದು ಮಾರಾಯ್ರೇ. ಯಾಕಿದನ್ನು ಹೇಳ್ತಿದ್ದೀವಿ ಅಂತ ನಿಮಗೂ ಗೊತ್ತಿದೆ. ಬಿಗ್ ಬಾಸ್ ಕನ್ನಡ (Bigg Boss Kannada) ಕಾರ್ಯಕ್ರಮದಲ್ಲಿ ಸ್ಪರ್ಧಿ, ಹುಲಿಯುಗುರು ಪೆಂಡೆಂಟ್, ಜೈಲು, ಅಲ್ಲಿಂದ ಕಾರ್ಯಕ್ರಮಕ್ಕೆ ವಾಪಸ್ಸು ಬಂದು ಮನೆಗೆ ಹೋಗ್ತೀನಿ ಅಂತ ಅತ್ತಿದ್ದು, ಅವರ ಮದುವೆ ವಿಡಿಯೋ ಬಿಡುಗಡೆಯಾಗಿದ್ದು, ಸಂತೋಷ್ ಬೀಗರು ಅಂತ ಹೇಳಿಕೊಂಡವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳು ಮತ್ತು ಅವರು ಹಳ್ಳಿಕಾರ್ ಹೋರಿಗಳ (Hallikar Bulls) ಒಡೆಯ ಅಂತ ಹೇಳಿಕೊಂಡಿದ್ದು-ಹೀಗೆ ಅವರು ಕಳೆದ ನಾಲ್ಕು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಸಂತೋಷ್ ಹಳ್ಳಿಕಾರ್ ಒಡೆಯ ಅಂತ ಹೇಳಿಕೊಂಡಿದ್ದು ಆ ತಳಿ ಹೋರಿಗಳನ್ನು ಹೊಂದಿರುವ ಬೇರೆ ರೈತರಿಗೆ ಕೋಪ ತರಿಸಿದೆ. ಸಂತೋಷ್ ಹೇಳಿಕೆಯಿಂದಾಗಿ ಹಳ್ಳಿಕಾರ್ ತಳಿ ಮತ್ತು ಅವುಗಳನ್ನು ಸಾಕುತ್ತಿರುವ ಅನೇಕ ರೈತರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರೊಬ್ಬರು ಟಿವಿ9ಗೆ ತಿಳಿಸಿದ್ದಾರೆ. ಹೋರಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿ ನಿಲುವು ಬದಲಾಗಲಿ ಅಂತ ಕಾರ್ಯಕ್ರಮವೊಂದನ್ನು ಮಾಡಿದರೂ ಅವರಲ್ಲಿ ಬದಲಾವಣೆ ಉಂಟಾಗಿಲ್ಲ, ಹಾಗಾಗಿ ತಾವೆಲ್ಲ ಕಾನೂನು ಸಮರಕ್ಕೆ ಸಿದ್ಧರಾಗಿದ್ದೇವೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!