ರೇಂಜ್ ಫಾರೆಸ್ಟ್ ಆಫೀಸರ್ ಗೆ ಡಿವಿ ಸದಾನಂದ ಗೌಡರು, ‘ನಾನ್ರೀ ಮಾಜಿ ಮುಖ್ಯಮಂತ್ರಿ!’ ಅಂತ ಹೇಳಿದ್ದು ಯಾಕೆ ಗೊತ್ತಾ?

ಚೆನ್ನಾಗಿ ತರಾಟೆಗೊಳಗಾದ ಬಳಿಕ ಆರ್ ಎಫ್ ಓ ತಾವು ಯಾರೂಂತ ಗೊತ್ತಾಗಲಿಲ್ಲ ಅನ್ನುತ್ತಾರೆ! ಆಗಲೇ ಸಂಸದರು,‘ನಾನ್ರೀ, ಸದಾನಂದ ಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ!’ ಅನ್ನುತ್ತಾರೆ. ಅವರ ಮಾತು ಕೇಳಿ ಪ್ರಾಯಶಃ ಹೆದರಿ ಆತಂಕಕ್ಕೊಳಗಾಗುವ ಅರ್ ಎಫ್ ಓ ಫೋನನ್ನು ಡಿ ಎಫ್ ಓಗೆ ನೀಡುತ್ತಾರೆ. ಅವರನ್ನೂ ಸದಾನಂದ ಗೌಡರು ತರಾಟೆಗೆ ತೆಗೆದುಕೊಳ್ಳುತ್ತಾರೆ.

ರೇಂಜ್ ಫಾರೆಸ್ಟ್ ಆಫೀಸರ್ ಗೆ ಡಿವಿ ಸದಾನಂದ ಗೌಡರು, ‘ನಾನ್ರೀ ಮಾಜಿ ಮುಖ್ಯಮಂತ್ರಿ!’ ಅಂತ ಹೇಳಿದ್ದು ಯಾಕೆ ಗೊತ್ತಾ?
|

Updated on: Nov 09, 2023 | 3:19 PM

ಮಂಡ್ಯ: ನಿನ್ನೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಇಂದು ಮಂಡ್ಯ ಪ್ರವಾಸದಲ್ಲಿದ್ದರು. ಜಿಲ್ಲಾ ಕಾರ್ಯಕರ್ತರೊಂದಿಗೆ ಸಭೆ ನಡೆಸುವಾಗ ಜಿಲ್ಲೆಯ ಕೆಲ ಭಾಗಗಳಲ್ಲಿ ಚಿರತೆ ಹಾವಳಿ (leopard menace) ಹೆಚ್ಚಾಗಿರುವುದನ್ನು ಅವರ ಗಮನಕ್ಕೆ ತರಲಾಯಿತು. ಗ್ರಾಮಸ್ಥರು ಹಲವಾರು ಬಾರಿ ವಿಷಯವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ್ಯೂ ಅವರಿಂದ ಯಾವುದೇ ಕ್ರಮ ಜರುಗಿಲ್ಲ ಅಂತ ಕಾರ್ಯಕರ್ತರು ಹೇಳಿದಾಗ ಸಿಡಿಮಿಡಿಗೊಳ್ಳುವ ಅವರು ಆರ್ ಎಫ್ ಓ ಗೆ (RFO) ಫೋನ್ ಮಾಡುವಂತೆ ಹೇಳುತ್ತಾರೆ. ಕಾರ್ಯಕರ್ತರೊಬ್ಬರು ಅಧಿಕಾರಿ ನಂಬರ್ ಗೆ ಡಯಲ್ ಮಾಡಿ ಪೋನನ್ನು ಸದಾನಂದ ಗೌಡರಿಗೆ ನೀಡಿದಾಗ ಅವರು ಅಧಿಕಾರಿಯ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರಿಂದ ಚೆನ್ನಾಗಿ ತರಾಟೆಗೊಳಗಾದ ಬಳಿಕ ಆರ್ ಎಫ್ ಓ ತಾವು ಯಾರೂಂತ ಗೊತ್ತಾಗಲಿಲ್ಲ ಅನ್ನುತ್ತಾರೆ! ಆಗಲೇ ಸಂಸದರು, ‘ನಾನ್ರೀ, ಸದಾನಂದ ಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ!’ ಅನ್ನುತ್ತಾರೆ. ಅವರ ಮಾತು ಕೇಳಿ ಪ್ರಾಯಶಃ ಹೆದರಿ ಆತಂಕಕ್ಕೊಳಗಾಗುವ ಅರ್ ಎಫ್ ಓ ಫೋನನ್ನು ಡಿ ಎಫ್ ಓಗೆ ನೀಡುತ್ತಾರೆ. ಅವರನ್ನೂ ಸದಾನಂದ ಗೌಡರು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ