AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾವೇ ರಚಿಸಿದ ಭಜನೆಯಿಂದ ರಾಮನಿಗೆ ಭಕ್ತಿ, ಶ್ರದ್ಧೆ ಸಮರ್ಪಿಸಿದ ಮೈಸೂರಿನ ಗಣಪತಿ ಸಚ್ಚಿದಾನಂದ ಶ್ರೀ

ತಾವೇ ರಚಿಸಿದ ಭಜನೆಯಿಂದ ರಾಮನಿಗೆ ಭಕ್ತಿ, ಶ್ರದ್ಧೆ ಸಮರ್ಪಿಸಿದ ಮೈಸೂರಿನ ಗಣಪತಿ ಸಚ್ಚಿದಾನಂದ ಶ್ರೀ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jan 19, 2024 | 1:43 PM

Share

ಅವರ ಕಂಚಿನ ಕಂಠದ ಮೂಲಕ ಹೊರಬೀಳುವ ರಾಮನ ಸ್ತುತಿಗೀತೆ ನಿಮ್ಮನ್ನು ನಿಸ್ಸಂದೇಹವಾಗಿ ಭಕ್ತಿಪರವಶರನ್ನಾಗಿಸುತ್ತದೆ. ಅವರ ಸ್ತುತಿಗೀತೆ ಅಯೋಧ್ಯೆ ವಾಸಿ ರಾಮ ನಮೋ ದ್ವಾರಕಾ ವಾಸಿ ಕೃಷ್ಣ ನಮೋ ಅಂತ ಶುರುವಾಗುತ್ತದೆ. ಶ್ರೀಗಳು ರಾಮನ ಜೊತೆ ದ್ವಾರಕೆಯ ಕೃಷ್ಣನಿಗೂ ಶ್ರದ್ಧೆಯಿಂದ ನಮಿಸುತ್ತಾರೆ.

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಮಯ ಸನಿಹವಾಗುತ್ತಿರುವಂತೆಯೇ ಭಾರತ ಭಕ್ತಿಸಾಗರದಲ್ಲಿ ಮುಳುಗಿದೆ. ರಾಮನ ಭಕ್ತರು ತಮ್ಮದ ಅದ ರೀತಿಯಲ್ಲಿ ಫ್ರಭು ರಾಮನಿಗೆ ಶ್ರದ್ಧೆ ನಿಷ್ಠೆಗಳನ್ನು ಸಮರ್ಪಿಸುತ್ತಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಗಣಪತಿ ಆಶ್ರಮದ (Ganapati Sachchidananda Ashram) ಬಗ್ಗೆ ನೀವು ಕೇಳಿರುತ್ತೀರಿ. ಇಲ್ಲಿನ ಗುರುಗಳಾಗಿರುವ ಗಣಪತಿ ಸಚ್ಚಿದಾನಂದ ಶ್ರೀಗಳು (Ganapati Sachchidananda Sri) ಶ್ರೀರಾಮನ ಭಜನೆಯೊಂದನ್ನು (Ram Bhajan) ತಾವೇ ರಚಿಸಿ ಅದನ್ನು ಟಿವಿ9 ಕನ್ನಡ ವಾಹಿನಿಗಾಗಿ ಪ್ರಸ್ತುತಪಡಿಸಿದ್ದಾರೆ. ಅವರ ಕಂಚಿನ ಕಂಠದ ಮೂಲಕ ಹೊರಬೀಳುವ ರಾಮನ ಸ್ತುತಿಗೀತೆ ನಿಮ್ಮನ್ನು ನಿಸ್ಸಂದೇಹವಾಗಿ ಭಕ್ತಿಪರವಶರನ್ನಾಗಿಸುತ್ತದೆ. ಅವರ ಸ್ತುತಿಗೀತೆ ಅಯೋಧ್ಯೆ ವಾಸಿ ರಾಮ ನಮೋ ದ್ವಾರಕಾ ವಾಸಿ ಕೃಷ್ಣ ನಮೋ ಅಂತ ಶುರುವಾಗುತ್ತದೆ. ಶ್ರೀಗಳು ರಾಮನ ಜೊತೆ ದ್ವಾರಕೆಯ ಕೃಷ್ಣನಿಗೂ ಶ್ರದ್ಧೆಯಿಂದ ನಮಿಸುತ್ತಾರೆ. ಸೀತಾಲೋಲ ರಾಮ ನಮೋ ಜಯಜಯ ರಾಮ ಅಂತ ಆವರು ಹಾಡುತ್ತಿದ್ದರೆ ಆಶ್ರಮದಲ್ಲಿರುವ ಭಕ್ತಗಣ ಕೋರಸ್ ಆಗುತ್ತಾರೆ. ಭಜನೆಯ ಬಳಿಕ ಶ್ರೀಗಳು ಬಾಲರಾಮ ಹರಿ ಶ್ರೀರಾಮ ಕೀ ಜೈ, ಬಾಲರಾಮ ಚಂದ್ರ ಕೀ ಜೈ, ಅಯೋಧ್ಯಾವಾಸಿ ರಾಮಚಂದ್ರ ಕೀ ಜೈ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.