AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಆಗ್ರಹಿಸಿ ಇಂದು ಗಾಣಗಾಪುರ ಬಂದ್, ಸುಡುವ ಬಿಸಿಲಲ್ಲಿ ಭಕ್ತರ ಪರದಾಟ

ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಆಗ್ರಹಿಸಿ ಇಂದು ಗಾಣಗಾಪುರ ಬಂದ್, ಸುಡುವ ಬಿಸಿಲಲ್ಲಿ ಭಕ್ತರ ಪರದಾಟ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2025 | 3:29 PM

ಮುಳ್ಳಿನ ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ಕಡಿದು ರಸ್ತೆಗೆ ಅಡ್ಡ ಹಾಕಿ ಬಂದ್ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ದೇವರ ದರ್ಶನಕ್ಕೆ ಬೇರೆ ಬೇರೆ ಊರುಗಳಿಂದ ಭಕ್ತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಬಹಳ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೇ ತಿಂಗಳು ಶುರುವಾಗಿದೆ ಮತ್ತು ಕಲಬರಗಿಯಲ್ಲಿ ತಾಪಮಾನ 44 ಡಿಗ್ರೀ ಸೆಲ್ಸಿಯಸ್​​ನಷ್ಟಿದೆ. ಕೆಂಡದಂಥ ಬಿಸಿಲು!

ಕಲಬುರಗಿ, ಮೇ 1: ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿರುವ ಗಾಣಗಾಪುರ ಅನ್ನು ದೇವಲ್ ಗಾಣಗಾಪುರ ಅಂತಲೂ ಕರೆಯೋದುಂಟು. ಇಲ್ಲಿರುವ ದತ್ತಾತ್ರೇಯ ದೇವಸ್ಥಾನ ಕೇವಲ ಕರ್ನಾಟಕ ಮಾತ್ರವಲ್ಲ ನೆರೆ ರಾಜ್ಯಗಳಲ್ಲೂ ಖ್ಯಾತಿಪಡೆದಿದೆ. ಪ್ರತಿದಿನ ಸಾವಿರಾರು ಭಕ್ತರು ದತ್ತಾತ್ರೇಯನ ದರ್ಶನಕ್ಕೆ ಬರುತ್ತಾರೆ. ಆದರೆ ದೇವಸ್ಥಾನ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರ ಮುಂದಾಗದಿರುವುದು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿವೆ. ಊರಿನ ರಸ್ತೆಗಳು ಸಹ ದುರಸ್ತಿಗಾಗಿ ಕಾಯುತ್ತಿವೆ. ದೇವಸ್ಥಾನದ ಅಭಿವೃದ್ದಿಗಾಗಿ ಆಗ್ರಹಿಸಿ ಇಂದು ಗಾಣಗಾಪುರ ಬಂದ್ ಗಾಗಿ ಕರೆ ನೀಡಿದ್ದು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್, ಜೀಪು ಮತ್ತು ಇತರ ವಾಹನಗಳಲ್ಲಿ ಬರುತ್ತಿರುವ ಭಕ್ತರನ್ನು ಊರ ಹೊರವಲಯದಲ್ಲೇ ಇಳಿಸಲಾಗುತ್ತಿದೆ.

ಇದನ್ನೂ ಓದಿ: ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಹರಿದು ಬಂದ ಭಕ್ತರ ದಂಡು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ