AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ನಿಲ್ಲದ ಕಲ್ಲುಗಣಿಗಾರಿಕೆ, ನೋಟಿಸ್ ನೀಡಿದ್ರೂ ಡೋಂಟ್ ಕೇರ್..

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಅಂತ ಘೋಷಣೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ‌ಒಂದು ಕಿಲೋಮೀಟರ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ ಅಂತ ಘೋಷಣೆ ಆಗಿದೆ. ಹೀಗಾಗಿ ಗಣಿ‌ ಇಲಾಖೆ ಕಪ್ಪತ್ತಗುಡ್ಡ ವ್ಯಾಪ್ತಿಯ 11 ಕಲ್ಲು ಗಣಿಗಾರಿಕೆ ತಕ್ಷಣ ಸ್ಥಗಿತಕ್ಕೆ ನೋಟಿಸ್ ನೀಡಿದೆ. ಆದ್ರೆ ನೋಟಿಸ್ಗೆ ಕ್ಯಾರೇ ಎನ್ನದ ಪ್ರಭಾವಿಗಳು ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ. ಕಪ್ಪತ್ತಗುಡ್ಡ ಉಳಿಸಲು ಮಠಾಧಿಶರು ಸೇರಿದಂತೆ ಪರಿಸರ ಪ್ರೇಮಿಗಳು ಹಗಲು ರಾತ್ರಿ ಹೋರಾಟ ಮಾಡಿದ್ರು. ಹೀಗಾಗಿ ಅಂದಿನ ಸರ್ಕಾರ ಕಪ್ಪತ್ತಗುಡ್ಡ […]

ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ನಿಲ್ಲದ ಕಲ್ಲುಗಣಿಗಾರಿಕೆ, ನೋಟಿಸ್ ನೀಡಿದ್ರೂ ಡೋಂಟ್ ಕೇರ್..
ಆಯೇಷಾ ಬಾನು
|

Updated on:Nov 09, 2020 | 7:58 AM

Share

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಅಂತ ಘೋಷಣೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ‌ಒಂದು ಕಿಲೋಮೀಟರ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ ಅಂತ ಘೋಷಣೆ ಆಗಿದೆ. ಹೀಗಾಗಿ ಗಣಿ‌ ಇಲಾಖೆ ಕಪ್ಪತ್ತಗುಡ್ಡ ವ್ಯಾಪ್ತಿಯ 11 ಕಲ್ಲು ಗಣಿಗಾರಿಕೆ ತಕ್ಷಣ ಸ್ಥಗಿತಕ್ಕೆ ನೋಟಿಸ್ ನೀಡಿದೆ. ಆದ್ರೆ ನೋಟಿಸ್ಗೆ ಕ್ಯಾರೇ ಎನ್ನದ ಪ್ರಭಾವಿಗಳು ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ.

ಕಪ್ಪತ್ತಗುಡ್ಡ ಉಳಿಸಲು ಮಠಾಧಿಶರು ಸೇರಿದಂತೆ ಪರಿಸರ ಪ್ರೇಮಿಗಳು ಹಗಲು ರಾತ್ರಿ ಹೋರಾಟ ಮಾಡಿದ್ರು. ಹೀಗಾಗಿ ಅಂದಿನ ಸರ್ಕಾರ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಅಂತ ಘೋಷಣೆ ಮಾಡಿದೆ. ಹೀಗಾಗಿ ಅರಣ್ಯ ಇಲಾಖೆ ಕೂಡ ಕಾರ್ಯಪ್ರವೃತ್ತವಾಗಿ ಕಟ್ಟು ನಿಟ್ಟಾಗಿ ವನ್ಯಜೀವಿ ಧಾಮ ಕಾನೂನು ಪಾಲನೆಗೆ ಮುಂದಾಗಿದೆ. ಆದ್ರೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಸೆರಗಿನಲ್ಲಿರೋ 11 ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್ ಮಾಡಿ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆದಿತ್ತು. ಹೀಗಾಗಿ ವನ್ಯಜೀವಿ ಧಾಮದ ಒಂದು ಕಿಲೋಮೀಟರ್ ವ್ಯಾಪ್ತಿವೆ ಬರುವ ಈ 11 ಕಲ್ಲು ಗಣಿಗಾರಿಕೆ ತಕ್ಷಣ ನಿಲ್ಲಿಸಲು ಗದಗ ಜಿಲ್ಲಾಧಿಕಾರಿ ಸುಂದರೇಶಬಾಬು ನೇತೃತ್ವದಲ್ಲಿ ಸಭೆ‌ ಮಾಡಿ ತಕ್ಷಣ ಗಣಿಗಾರಿಕೆ ಸ್ಥಗಿತಕ್ಕೆ ಗಣಿ ಇಲಾಖೆ ಮೂಲಕ ನೋಟಿಸ್ ನೀಡಲಾಗಿದೆ. ಆದ್ರೆ ನೋಟಿಸ್ ನೀಡಿ ಒಂದು ತಿಂಗಳಾದ್ರೂ ಗಣಿಗಾರಿಕೆ ಮಾತ್ರ ನಿಂತಿಲ್ಲ.

ನೋಟಿಸ್​ಗೆ ಡೋಂಟ್ ಕೇರ್ ಎನ್ನದೇ ಎಸ್.ಆರ್. ಬಳ್ಳಾರಿ ಮತ್ತು ಶಿವಗಂಗಾ ಸ್ಟೋನ್ ಕ್ರಷಿಂಗ್ ನಿಯಮ ಉಲ್ಲಂಘಿಸಿ ಹಗಲು, ರಾತ್ರಿ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸುತ್ತಿರೋ ಆರೋಪ ಕೇಳಿ ಬಂದಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ್ರೂ ಗಣಿ‌ ಇಲಾಖೆ ಹಾಗೂ ಜಿಲ್ಲಾಡಳಿತ ಗಪ್ ಚುಪ್ ಆಗಿವೆ.

ಕಲ್ಲು ಗಣಿಗಾರಿಕೆ ಈ ಭಾಗದ ವನ್ಯಜೀವಿ ಧಾಮ 1 ಕಿಲೋಮೀಟರ್ ವ್ಯಾಪ್ತಿ ಕೈಬಿಡುವಂತೆ ಅರಣ್ಯ ಇಲಾಖೆ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ ಪತ್ರ ಬರೆದಿದ್ರು. ಶಾಸಕರ ಪ್ರಭಾವದಿಂದ ಗಣಿಗಾರಿಕೆಗೆ ನೋಟಿಸ್ ನೀಡಿದ್ರೂ ಬ್ಲಾಸ್ಟಿಂಗ್ ಮಾಡಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ ಎಂಬ ಆರೋಪವಿದೆ. ಶಿವಗಂಗಾ ಸ್ಟೋನ್ ಕ್ರಷಿಂಗ್ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಭಾವಿಗಳು ನಿಯಮ ಉಲ್ಲಂಘಿಸಿ ಗಣಿಗಾರಿಕೆ ಮಾಡುತ್ತಿರುವ ಆರೋಪ ಗಟ್ಟಿಯಾಗುತ್ತಿದೆ. ಆದರೆ ಇದಕ್ಕೆಲ್ಲ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಇನ್ನಾದ್ರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Published On - 7:03 am, Mon, 9 November 20