ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಗ್ಗೆ ಬಹಳ ಗೌರವವಿತ್ತು, ಈಗಿಲ್ಲ: ಮಧು ಬಂಗಾರಪ್ಪ, ಶಿಕ್ಷಣ ಸಚಿವ

|

Updated on: May 30, 2024 | 2:25 PM

ಸ್ವಾಮಿ ಶಿಕ್ಷಣ ಸಚಿವರೇ, ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಮಕ್ಕಳು, ಱಂಕ್ ಗಿಟ್ಟಿಸಲ್ಲ, ಹೆಚ್ಚೆಂದರೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ, ಅಷ್ಟೇ! ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಾತಾಡುವ ಮಧು ಬಂಗಾರಪ್ಪ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುತ್ತಾರೆ.

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ತಾನು ಶಿಕ್ಷಣ ಸಚಿವನಾದ ಬಳಿಕ ಶಿಕ್ಷಣದ ಗುಣಮಟ್ಟ ಕುಸಿದಿಲ್ಲ ಆದರೆ ಸುಧಾರಿಸಿದೆ ಎಂದು ತಮ್ಮನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರನ್ನು (BJP leaders) ತರಾಟೆಗೆ ತೆಗೆದುಕೊಂಡರು. ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು 625/625 ಪಡೆಯುತ್ತಿದ್ದರು, ಆದರೆ ಈ ಬಾರಿ (SSLC exams) ಒಬ್ಬ ವಿದ್ಯಾರ್ಥಿನಿ ಮಾತ್ರ ಶತ ಪ್ರತಿಶತ ಅಂಕ ಪಡೆದಿದ್ದಾಳೆ, ಇದಕ್ಕೆ ಕಾರಣವೆಂದರೆ ನಾವು ಪರೀಕ್ಷೆಗಳಲ್ಲಿ ಕಾಪಿ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು. ಸ್ವಾಮಿ ಶಿಕ್ಷಣ ಸಚಿವರೇ, ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಮಕ್ಕಳು, ಱಂಕ್ ಗಿಟ್ಟಿಸಲ್ಲ, ಹೆಚ್ಚೆಂದರೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ, ಅಷ್ಟೇ! ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಾತಾಡುವ ಮಧು ಬಂಗಾರಪ್ಪ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುತ್ತಾರೆ.

ಅವರ ಅವಧಿಯಲ್ಲಿ ಒಮ್ಮೆ 1,994 ಮತ್ತೊಮ್ಮೆ 1,185-ಹೀಗೆ ಸುಮಾರು 3,100 ಶಿಕ್ಷಕರ ನೇಮಕಾತಿ ಮಾತ್ರ ಆಗಿದೆ ಎನ್ನುತ್ತಾರೆ. 2017-18 ರ (ಕಾಂಗ್ರೆಸ್ ಸರ್ಕಾರ) ಅಂಕಿ-ಅಂಶ ನೀಡಿ ಕೇವಲ 1,727 ಶಿಕ್ಷಕರ ನೇಮಕಾತಿ ಮಾತ್ರ ಆಗಿತ್ತು ಎನ್ನುತ್ತಾರೆ. ತಾನು ಶಿಕ್ಷಣ ಸಚಿವನಾಗಿ ಒಂದು ವರ್ಷ ಮಾತ್ರ ಆಗಿದೆ, ಆದರೆ ಈ ಅವಧಿಯಲ್ಲಿ 13,000 ಶಿಕ್ಷಕರ ನೇಮಕಾತಿ ಜರುಗಿದೆ, ರಾಜ್ಯದಲ್ಲಿ ಇನ್ನೂ 43,000ಹುದ್ದೆಗಳು ಖಾಲಿ ಇವೆ, ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಅವುಗಳನ್ನು ಸಹ ಆದಷ್ಟು ಶೀಘ್ರ ಭರ್ತಿ ಮಾಡುವುದಾಗಿ ಸಚಿವ ಹೇಳಿದರು. ಹಿಂದಿನ ಸರ್ಕಾರದಲ್ಲಿ ನಡೆದ ಹೊಲಸನ್ನೆಲ್ಲ ತಾನು ಸ್ವಚ್ಛ ಮಾಡುತ್ತಿರುವುದಾಗಿ ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿವ ಮಧು ಬಂಗಾರಪ್ಪಗೆ ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಕಡಿಮೆ ಇದೆ ಎಂದ ಪಿ ರಾಜೀವ್

Published On - 2:21 pm, Thu, 30 May 24

Follow us on