ದಾವಣಗೆರೆ, ಫೆ.24: ಹರಿಹರದ ಹರಿಹರೇಶ್ವರ ಬ್ರಹ್ಮರಥೋತ್ಸವ(Harihareshwara Brahma Rathotsava) ಇಂದು ನೆರವೇರಿದ್ದು, ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಫೆಗೆ ಭಾಜನರಾದರು. ಹೌದು, ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಇರುವ ಹರಿಹರೇಶ್ವರ ಪುಣ್ಯಕ್ಷೇತ್ರದಲ್ಲಿ ಭಾರತ ಹುಣ್ಣಿಮೆಯ ಆಸುಪಾಸು ವಿಶೇಷ ಬ್ರಹ್ಮರಥೋತ್ಸವ ನಡೆಯುತ್ತದೆ. ಹರಿ ಮತ್ತು ಹರ ಒಂದೇ ಕಡೆ ಪೂಜಿಸಲ್ಪಡುವ ಜಗತ್ತಿನ ಏಕೈಕ ಪುಣ್ಯಕ್ಷೇತ್ರ ಇದಾಗಿದ್ದು, ರಥ ಬೀದಿಯಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಾಗರ ಹರಿಹರೇಶ್ವರಗೆ ಹರಕೆ ಪೂರೈಸಿದರು. ನವ ವಿವಾಹಿತರು ಸಹ ಪಾಲ್ಗೊಂಡು ಭಕ್ತಿ ಅರ್ಪಣೆ ಮಾಡಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ