ನಾನು ದೂರು ದಾಖಲಿಸಿರುವ ಎಲ್ಲ ಪ್ರಕರಣಗಳ ಕಾಗದಪತ್ರಗಳನ್ನು ಈಡಿ ವಿಚಾರಣೆಗೆ ತಂದಿದ್ದೇನೆ: ಗಂಗರಾಜು
ತನ್ನ ದೂರಿನಲ್ಲಿ ಉಲ್ಲೇಖವಾಗಿರುವ ಮಂಜುನಾಥ್ ಬಗ್ಗೆ ಬೆಳಕು ಚೆಲ್ಲಿದ ಗಂಗರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ಗೆ ಪರಮಾಪ್ತರಾಗಿರುವ ಮಂಜುನಾಥ ಒಬ್ಬ ಡೆವಲಪರ್, ಮುಡಾದಿಂದ 50:50ಅನುಪಾತದಲ್ಲಿ ಅಲಾಟ್ ಆಗಿರುವ ನಿವೇಶನಗಳಲ್ಲಿ ಅತಿದೊಡ್ಡ ಫಲಾನುಭವಿ ಅವರೇ ಎಂದರು.
ಬೆಂಗಳೂರು: ಮುಡಾ ಹಗರಣವನ್ನು ಬಯಲಿಗೆಳೆದಿರುವ ಸಾಮಾಜಿಕ ಕಾರ್ಯಕರ್ತ ಗಂಗರಾಜು ಇಂದು ಈಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಕಚೇರಿಯೊಳಗೆ ಹೋಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದಿಂದ ತನಗೆ ನೋಟೀಸ್ ಬಂದಿದೆ, ನಿರ್ದಿಷ್ಟವಾಗಿ ಯಾವ ಪ್ರಕರಣದ ವಿಚಾರಣೆ ಅಂತ ನೋಟೀಸ್ನಲ್ಲಿ ಉಲ್ಲೇಖವಾಗಿಲ್ಲ; ಹಾಗಾಗಿ, ಮುಡಾ ಸೇರಿದಂತೆ ತಾನು ದಾಖಲಿಸಿರುವ ಎಲ್ಲ ದೂರುಗಳ ಪ್ರಕರಣಗಳಿಗೆ ಸಂಬಂಧಪಟ್ಟ ಕಾಗದಪತ್ರಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸೈಟುಗಳನ್ನು ಮುಡಾಗೆ ಹಿಂತಿರುಗಿಸುವುದು ಕಳ್ಳನೊಬ್ಬ ಕದ್ದ ಮಾಲನ್ನು ವಾಪಸ್ಸು ಕೊಟ್ಟಂತೆ: ಗಂಗರಾಜು
Follow Us
Latest Videos
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
