Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಸುಮ್ಮನೆ ಬಂದಿದ್ದಲ್ಲ, ಕಷ್ಟಪಟ್ಟು ಸಂಪಾದಿಸಿದ್ದೇನೆ, ಅದೆಷ್ಟಿದೆ ಅಂತ ನಂಗಷ್ಟೇ ಗೊತ್ತು: ಶಿವಕುಮಾರ್

ಆಸ್ತಿ ಸುಮ್ಮನೆ ಬಂದಿದ್ದಲ್ಲ, ಕಷ್ಟಪಟ್ಟು ಸಂಪಾದಿಸಿದ್ದೇನೆ, ಅದೆಷ್ಟಿದೆ ಅಂತ ನಂಗಷ್ಟೇ ಗೊತ್ತು: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2024 | 7:50 PM

ತಮ್ಮ ವಿರುದ್ಧ ಡಿಎ ಕೇಸನ್ನು ಬಿಎಸ್ ಯಡಿಯೂರಪ್ಪ ಸಿಬಿಐಗೆ ವಹಿಸಿದ್ದರು, ಅದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ಲೋಕಾಯುಕ್ತಗೆ ವರ್ಗಾಯಿಸಿದ್ದಾರೆ, ಮೊನ್ನೆ ಲೋಕಾಯುಕ್ತ ಅಧಿಕಾರಿಗಳು ಕರೆದ ವಿಚಾರಣೆಗೆ ಹಾಜರಾಗಿದ್ದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ (ಡಿಎ ಕೇಸ್) ಸಂಬಂಧಿಸಿದಂತೆ ತನ್ನ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ನಿರಾಳರಾಗಿರುವ ಡಿಸಿಎಂ ಡಿಕೆ ಶಿವಕುಮಾರ್, ಇದು ತನಗೆ ಸಂದಿರುವ ಜಯಕ್ಕಿಂತ ಹೆಚ್ಚು ರಾಜ್ಯ ಸರ್ಕಾರಕ್ಕೆ ಸಂದಿರುವ ಗೆಲುವು ಅಂತ ಹೇಳಿದರು. ರಾಜಕಾರಣದಲ್ಲಿ ಶ್ರಮಪಟ್ಟು ಬೆವರು ಸುರಿಸಿ ಆಸ್ತಿ ಸಂಪಾದಿಸಿದ್ದೇನೆ, ಅದೆಷ್ಟಿದೆ ಅಂತ ತನಗೆ ಮಾತ್ರ ಗೊತ್ತು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮುಡಾ ಹಗರಣ; ಸಿಎಂ ಸಿದ್ದರಾಮಯ್ಯರಿಂದ ಯಾವ ಪ್ರಮಾದವೂ ಜರುಗಿಲ್ಲ: ಡಿಕೆ ಶಿವಕುಮಾರ್