‘ಬಳ್ಳಾರಿ ಜೈಲಿಗೆ ದರ್ಶನ್​ ಅಡ್ಜೆಸ್ಟ್​ ಆಗಲೇಬೇಕು’: ಎಸ್​.ಪಿ. ಶೋಭಾರಾಣಿ ಖಡಕ್​ ಮಾತು

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೇಟ್​ಮೆಂಟ್​ ಪಡೆಯುತ್ತಿದ್ದ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಆ ವಾತಾವರಣಕ್ಕೆ ಅವರು ಹೊಂದಿಕೊಳ್ಳಬೇಕು. ಆ ಕುರಿತು ಬಳ್ಳಾರಿ ಎಸ್​.ಪಿ. ಶೋಭಾರಾಣಿ ಅವರು ಮಾತನಾಡಿದ್ದಾರೆ. ಇಂದು (ಆಗಸ್ಟ್​ 29) ಜೈಲಿಗೆ ಭೇಟಿ ನೀಡಿದ್ದ ಶೋಭಾರಾಣಿ ಅವರು ಬಳಿಕ ಮಾಧ್ಯಮಗಳಿಗೆ ತಮ್ಮ ಹೇಳಿಕೆ ನೀಡಿದರು.

‘ಬಳ್ಳಾರಿ ಜೈಲಿಗೆ ದರ್ಶನ್​ ಅಡ್ಜೆಸ್ಟ್​ ಆಗಲೇಬೇಕು’: ಎಸ್​.ಪಿ. ಶೋಭಾರಾಣಿ ಖಡಕ್​ ಮಾತು
|

Updated on:Aug 29, 2024 | 9:29 PM

ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿಗೆ ದರ್ಶನ್​ ಹೊಂದಿಕೊಳ್ಳಲೇಬೇಕು ಎಂದು ಬಳ್ಳಾರಿ ಎಸ್.ಪಿ. ಶೋಭಾರಾಣಿ ಹೇಳಿದ್ದಾರೆ. ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇಲ್ಲಿಗೆ ಬಂದಮೇಲೆ ಅಡ್ಜೆಸ್ಟ್​ ಆಗಲೇಬೇಕು. ನಾವು ಕೂಡ ಹೊರಗಡೆಯಿಂದ ಬಂದವರು’ ಎಂದು ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:15 pm, Thu, 29 August 24

Follow us