AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HD Revanna: ಲೋಕಸಭೆ ಎಲೆಕ್ಷನ್​ಗೆ BJP ಜೊತೆ ಹೊಂದಾಣಿಕೆ ಏನಾದ್ರೂ ಇದ್ಯಾ?

ಕರೆಂಟ್ ಬಿಲ್ ನಲ್ಲಿ ಕೆಲ ಗೊಂದಲ ಇದೆ.. ಈಗ ಹೊಸದಾಗಿ ಸ್ಲ್ಯಾಬ್ ಮಾಡಿದಾರೆ. ನಾನು ಇಂಧನ ಮಂತ್ರಿಯಾಗಿ 40 ತಿಂಗಳು ಕೆಲಸ ಮಾಡಿದ್ದೇನೆ. ಬಡವರು, ಮಧ್ಯಮ ವರ್ಗ ಕ್ಕೆ ಒಂದಕ್ಕೆ ಮೂರುಪಟ್ಟು ಬಿಲ್ ಬರುತ್ತಿದೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಸಾಧು ಶ್ರೀನಾಥ್​
|

Updated on: Jun 30, 2023 | 6:13 PM

Share

ಹಾಸನದಲ್ಲಿ ಮಾಜಿ ಸಚಿವ ಹೆಚ್​​ ಡಿ ರೇವಣ್ಣ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ರೇವಣ್ಣ ಹೇಳಿಕೆಯ ಸಾರಾಂಶ ಹೀಗಿದೆ: ಹೊಸ ಸರ್ಕಾರ‌ ಬಂದು 45 ದಿನ ಆಗಿದೆ. ಅವರು ಚುನಾವಣಾ ಸಂದರ್ಭದಲ್ಲಿ ಕೆಲವು ಗ್ಯಾರಂಟಿ ಹೇಳಿದ್ರು. ಅವೆಲ್ಲವನ್ನೂ ಜಾರಿ ಮಾಡಲಿ ಎಂದು ನಾವು ಯಾವುದೇ ಪತ್ರಿಕಾಗೋಷ್ಠಿ ಮಾಡಿರಲಿಲ್ಲ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಅವರು 10 ಕೆಜಿ ಅಕ್ಕಿ ಕೊಟ್ಟಿಲ್ಲ ಎಂದು ಬಿಜೆಪಿ ಟೀಕೆ ಮಾಡಿದಾರೆ. ಯಾವುದೇ ರೈತರು ವ್ಯವಸಾಯ ಮಾಡಲು ಎಕರೆಗೆ 10 ಸಾವಿರ ಕೊಡಬೇಕು ಎನ್ನೋದು ನಮ್ಮ ಘೋಷಣೆ ಆಗಿತ್ತು. 2018 ರಲ್ಲಿ ಕುಮಾರಸ್ವಾಮಿ ಅವರು ಆಗ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಸಾಲಾ ಮನ್ನಾ ಮಾಡಿದ್ರು. ನಂತರ ಸರ್ಕಾರ ಕೂಡ ಹೋಯ್ತು. ಈಗ ಈ ಸರ್ಕಾರ ಬಂದಿದೆ ಏನು ಮಾಡ್ತಾರೊ ನೋಡೋಣ. ಕೇಂದ್ರ ಅಕ್ಕಿ ಕೊಡ್ತಾ ಇಲ್ಲಾ‌ಅಂತಾರೆ. ಅವರು ಕೊಟ್ಟರೆ ಎಲ್ಲರಿಗೂ ಕೊಡಬೇಕು. ಹಾಗಾಗಿ ಆಗಲ್ಲ ಎಂದು ಅವರು ಹೇಳ್ತಾ ಇದಾರೆ. ಈಗ ಅಕ್ಕಿ ಸಿಕ್ಕಿಲ್ಲ ಎಂದು ಹಣ ಕೊಡೊದಾಗಿ ಹೇಳಿದ್ದಾರೆ. ಚುನಾವಣಾ ವೇಳೆಯಲ್ಲಿ ನಾವೇ ಪ್ರತ್ಯೇಕವಾಗಿ ಹತ್ತು ಕೆಜಿ ಕೊಡ್ತಿವೊ ಇಲ್ಲ, ಕೊಡ್ತಿರೊ ಐದು ಕೆಜಿಗೆ ಹತ್ತು ಕೆಜಿ ಸೇರಿಸಿ‌ಕೊಡ್ತಿವಿ ಅಂದಿದ್ದರೊ‌ ಗೊತ್ತಿಲ್ಲ. ಕರೆಂಟ್ ಬಿಲ್ ನಲ್ಲಿ ಕೆಲ ಗೊಂದಲ ಇದೆ.. ಈಗ ಹೊಸದಾಗಿ ಸ್ಲ್ಯಾಬ್ ಮಾಡಿದಾರೆ. ನಾನು ಇಂಧನ ಮಂತ್ರಿಯಾಗಿ 40 ತಿಂಗಳು ಕೆಲಸ ಮಾಡಿದ್ದೇನೆ. ಬಡವರು, ಮಧ್ಯಮ ವರ್ಗ ಕ್ಕೆ ಒಂದಕ್ಕೆ ಮೂರುಪಟ್ಟು ಬಿಲ್ ಬರುತ್ತಿದೆ ಎಂದು ರೇವಣ್ಣ ಕಿಡಿಕಾರಿದ್ದಾರೆ.