ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ; ವಿಭೂತಿ ಫಾಲ್ಸ್ಗೆ ಜೀವ ಕಳೆ
ಮಳೆಗಾಲ ಆರಂಭವಾಗುವುದನ್ನೇ ಕಾದುಕುಳಿತಿದ್ದ ಪ್ರಕೃತಿ ಪ್ರೀಯರಿಗೆ, ಮಳೆಗಾಲ ಸ್ವರ್ಗದಂತೆ ಭಾಸವಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್ಗೆ ಇದೀಗ ಜೀವ ಕಳೆ ಬಂದಿದೆ. ಆದರೆ, ಮೈತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ ನೋಡಲು ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಮಾಡಿ ಬೋರ್ಡ್ ಹಾಕಿದೆ.
ಉತ್ತರ ಕನ್ನಡ, ಜು.09: ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಪಾತಗಳ ಜಿಲ್ಲೆಯಲ್ಲಿ ಫಾಲ್ಸ್ಗಳು ಮೈತುಂಬಿ ಹರಿಯುತ್ತಿದೆ. ಹೌದು, ಮಳೆಗಾಲ ಆರಂಭವಾಗುವುದನ್ನೇ ಕಾದುಕುಳಿತಿದ್ದ ಪ್ರಕೃತಿ ಪ್ರೀಯರಿಗೆ, ಮಳೆಗಾಲ ಸ್ವರ್ಗದಂತೆ ಭಾಸವಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್ಗೆ ಇದೀಗ ಜೀವ ಕಳೆ ಬಂದಿದೆ. ಆದರೆ, ಮೈತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ ನೋಡಲು ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಮಾಡಿ ಬೋರ್ಡ್ ಹಾಕಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದೆ. ಕಾಡಿನ ಮಧ್ಯದ ಬೆಟ್ಟ ಸಿಳಿ ಬರುವ ಜಲಪಾತವನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಇದೀಗ ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ವಿಭೂತಿ ಫಾಲ್ಸ್ ಬೀಕೋ ಅಂತಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

