‘ಅವಕಾಶ ಸಿಕ್ಕರೆ ಮೈಸೂರು ಸ್ಯಾಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್ ಪ್ರಭಾಕರ್

Edited By:

Updated on: May 28, 2025 | 11:34 AM

ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್​ ಸೋಪ್ ರಾಯಭಾರಿ ಆಗಿದ್ದಾರೆ. ಇದಕ್ಕೆ ಅವರು ಎರಡು ವರ್ಷಕ್ಕೆ 6 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಹೀಗಿರುವಾಗಲೇ ಎಲ್ಲಾ ಹೀರೋಗಳು ತಮಗೆ ಅವಕಾಶ ಸಿಕ್ಕರೆ ಬ್ರ್ಯಾಂಡ್ ಪ್ರಚಾರ ಮಾಡಲು ರೆಡಿ ಎಂದಿದ್ದಾರೆ.

ತಮನ್ನಾ ಭಾಟಿಯಾ (Tamannah Bhatiaa) ಅವರು ಮೈಸೂರು ಸ್ಯಾಂಡಲ್​ಸೋಪ್ ರಾಯಭಾರಿ ಆಗಿದ್ದು, ಇದಕ್ಕಾಗಿ ಎರಡು ವರ್ಷಕ್ಕೆ 6 ಕೋಟಿ ಪಡೆದಿದ್ದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಹೀಗಿರುವಾಗಲೇ ಎಲ್ಲಾ ಕಲಾವಿದರು ತಮಗೆ ಅವಕಾಶ ಸಿಕ್ಕರೆ ರಾಯಭಾರಿ ಆಗಲು ರೆಡಿ ಎಂದಿದ್ದಾರೆ. ಈಗ ಈ ಬಗ್ಗೆ ಮಾತನಾಡಿರೋ ವಿನೋದ್ ಪ್ರಭಾಕರ್, ‘ಕನ್ನಡ ಕಲಾವಿದರನ್ನು ಮಾಡಲು ಅವಕಾಶ ಇತ್ತು. ಈ ಮೊದಲು ನಂದಿನಿಗೆ ಪುನೀತ್ ರಾಜ್​ಕುಮಾರ್ ಪ್ರಚಾರ ರಾಯಭಾರಿ ಆಗಿದ್ದರು’ ಎಂದಿರೋ ವಿನೋದ್ ಪ್ರಭಾಕರ್ ತಮಗೆ ಅವಕಾಶ ಸಿಕ್ಕರೆ ತಾವು ಮೈಸೂರು ಸ್ಯಾಂಡಲ್​ ಸೋಪ್​​ನ ಪ್ರಚಾರ ರಾಯಭಾರಿ ಆಗಲು ರೆಡಿ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 28, 2025 10:37 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More