AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು

‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು

ರಾಜೇಶ್ ದುಗ್ಗುಮನೆ
|

Updated on: Jun 10, 2025 | 10:34 AM

ಮಡೆನೂರು ಮನು ಅವರು ಮಾಡಿದ ಅವಾಂತರ ಒಂದೆರಡಲ್ಲ. ಸಹ ಕಲಾವಿದೆಗೆ ಅವರು ಕಿರುಕುಳ ನೀಡಿದ್ದರು. ಅವರ ಮೇಲೆ ಅತ್ಯಾಚಾರ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮನು ಅವರು ಜೈಲು ಸೇರಿ ಬಂದಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಮಾತನಾಡಿದ್ದಾರೆ. ಅವರು ದುಖಃ ತೋಡಿಕೊಂಡಿದ್ದಾರೆ.

ಮಡೆನೂರು ಮನು (Madenuru Manu) ಅವರು ಸದ್ಯ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದಾರೆ. ಸಹ ಕಲಾವಿದೆ ಮೇಲೆ ಅತ್ಯಾಚಾರ ಮಾಡಿದ ಆರೋಪ ಅವರ ಮೇಲೆ ಇದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳ ಬಗ್ಗೆ ಮನು ಮಾತನಾಡಿದ್ದಾರೆ ಎನ್ನುವ ಆಡಿಯೋ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಆಡಿಯೋ ಬಿಡೋಕೆ ಕಾರಣ ಏನು ಎಂಬುದನ್ನು ಸಂತ್ರಸ್ತೆ ವಿವರಿಸಿದ್ದಾರೆ. ‘ನನ್ನ ಹಾಗೂ ಮನು ಮಧ್ಯೆ ಇರೋದು ಪ್ರಕರಣ. ಈ ಪ್ರಕರಣಕ್ಕೆ ಸಂಬಂಧ ಇಲ್ಲದೆ ಇರುವ ಆಡಿಯೋನ ಅವನು ರಿಲೀಸ್ ಮಾಡಿದ. ಇದಕ್ಕೆ ನಾನು ಈ ಆಡಿಯೋ ಬಿಡುಗಡೆ ಮಾಡಿದೆ. ಅವನ ಬುದ್ಧಿ ಏನು ಎಂಬುದನ್ನು ಜನರಿಗೆ ತೋರಿಸಬೇಕಿತ್ತು’ ಎಂದಿದ್ದಾರೆ ಸಂತ್ರಸ್ತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.