Loading video

Karnataka Budget Session; ಎಲ್ಲ ತಾಲ್ಲೂಕು   ಕೇಂದ್ರಗಳಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಬೇಕಿತ್ತು! ಪ್ರಿಯಾಂಕ್ ಖರ್ಗೆ

|

Updated on: Mar 06, 2025 | 6:50 PM

ಶಿವುಕುಮಾರ್ ಮತ್ತು ಖರ್ಗೆಗೆ ಉತ್ತರ ನೀಡುವ ಅಶ್ವಥ್ ನಾರಾಯಣ, ಯೂನಿವರ್ಸಿಟಿಗಳನ್ನು ಸ್ಥಾಪಿಸುವಾಗ ಪ್ರಾಂತ್ಯ, ಭಾಷೆ ಮತ್ತು ಭಾವನೆಗಳಿಗೆ ಬೆಲೆ ನೀಡಬೇಕಾಗುತ್ತದೆ, ಸರ್ಕಾರ ನೀಡುತ್ತಿರುವ ಸಮರ್ಥನೆಯನ್ನೇ ಒಪ್ಪಿಕೊಳ್ಳುವುದಾದರೆ ರಾಜ್ಯದ ಮೊದಲ ವಿಶ್ವವಿದ್ಯಾಲಯ ಮಾನಸ ಗಂಗೊತ್ರಿಯೇ ಸಾಕಿತ್ತು, ಬೇರೆ ಕಡೆಗಳಲ್ಲೆಲ್ಲ ಯೂನಿವರ್ಸಿಟಿಗಳನ್ನು ಓಪನ್ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು

ಬೆಂಗಳೂರು, ಮಾರ್ಚ್​ 6 : ಬಿಜೆಪಿ ಸರ್ಕಾರ ಆಧಿಕಾರದಲ್ಲಿದ್ದಾಗ ಆರಂಭಸಿದ್ದ ವಿಶ್ವವಿದ್ಯಾಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಲು ನಿರ್ಧಸಿರುವ ವಿಷಯ ಮೇಲೆ ಭಾರೀ ಸದನದಲ್ಲಿ ಚರ್ಚೆ ನಡೆಯಿತು. ಡಿಕೆ ಶಿವಕುಮಾರ್ ನೀವು ಜನಗಳನ್ನು ವಿಂಗಡಿಸುತ್ತೀರಿ ಆದರೆ ನಾವು ಒಗ್ಗೂಡಿಸುತ್ತೇವೆ, ನಿಮಗೂ ನಮಗೂ ಇರೋ ವ್ಯತ್ಯಾಸವೇ ಅದು ಅಂತ ಡಾ ಅಶ್ವಥ್ ನಾರಾಯಣ್​ಗೆ ಹೇಳುತ್ತಾರೆ. ಅವರಿಗೆ ಬೆಂಬಲ ನೀಡುವ ಪ್ರಿಯಾಂಕ್ ಖರ್ಗೆ ಜಿಲ್ಲೆಗೊಂದು ಯಾಕೆ ತಾಲ್ಲೂಕಿಗೊಂದು ಯೂನಿವರ್ಸಿಟಿ ಮಾಡಿ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಶಿವಕುಮಾರ್ ಕಾಣಲು ಬಂದಾಗ ನಾಪತ್ತೆಯಾಗಿದ್ದ ರಾಜಣ್ಣನವರು ಜಾರಕಿಹೊಳಿ ಮನೆ ಸಭೆಯಲ್ಲಿ ಪ್ರತ್ಯಕ್ಷ!