AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾವಿದರಿಗೆ ಶಿವಕುಮಾರ್ ನಟ್ಟು ಬೋಲ್ಟು ಸರಿ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ: ಆರ್ ಅಶೋಕಕಲಾವಿದರಿಗೆ ಶಿವಕುಮಾರ್ ನಟ್ಟು ಬೋಲ್ಟು ಸರಿ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ: ಆರ್ ಅಶೋಕ

ಕಲಾವಿದರಿಗೆ ಶಿವಕುಮಾರ್ ನಟ್ಟು ಬೋಲ್ಟು ಸರಿ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 06, 2025 | 7:47 PM

Share

ಅಶೋಕ ಜೊತೆ ಡಾ ಅಶ್ವಥ್ ನಾರಾಯಣ ಧ್ವನಿಗೂಡಿಸಿದಾಗ, ಸುಮ್ನೆ ಕೂತ್ಕೊಳಯ್ಯ ನಿನ್ನ ಭಾಷೆ ಗೊತ್ತಿಲ್ಲವಾ? ಗಂಡ್ಸು ಅಂತೆಲ್ಲ ಮಾತಾಡ್ತೀಯ ಅಂತ ಶಿವಕುಮಾರ್ ಹೇಳುತ್ತಾರೆ. ಅದಕ್ಕೆ ಅಶ್ವಥ್, ತಾಕತ್ತಿದ್ರೆ ಮಾಡಿದ ಕೆಲಸ ತೋರಿಸಿ ಅಂತ ಹೇಳಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ಒಂದು ಕ್ಯಾಂಪಸ್ ಇರಲಿಲ್ಲ, ಐಸಿಯು ಇರಲಿಲ್ಲ, ನೀವು ಇದುವರೆಗೆ ಏನು ಕೆಲಸ ಮಾಡಿದ್ದೀರಿ ನಾನೇನು ಮಾಡಿದ್ದೇನೆ ಅಂತ ತುಲನೆ ಮಾಡಿ ನೋಡೋಣ ಅಂತ ಸವಾಲೆಸೆಯುತ್ತಾರೆ.

ಬೆಂಗಳೂರು, ಮಾರ್ಚ್ 6 : ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಇಂದು ವಾಕ್ಸಮರ ನಡೆಯಿತು. ಡಿಕೆ ಶಿವಕುಮಾರ್ (DK Shivakumar ) ಕಲಾವಿದರ ವಿಷಯದಲ್ಲಿ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತ ಹೇಳಿದ್ದು ಸರಿಯಲ್ಲ, ಅವರ ಹೃದಯದಲ್ಲಿ ಕೆಟ್ಟ ಭಾವನೆಯೇನೂ ಇರಲಿಕ್ಕಿಲ್ಲ, ಅದರೆ ಅವರು ಬಳಸಿದ ಭಾಷೆ ತಪ್ಪು ಸಂದೇಶ ರವಾನಿಸುತ್ತದೆ ಮತ್ತು ದೀರ್ಘಕಾಲ ಮಾಯಲಾರದ ಘಾಸಿಯನ್ನುಂಟು ಮಾಡುತ್ತದೆ ಎಂದು ಆರ್ ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿನಿಮಾರಂಗದವರು ನಾನಾಡಿದ ಮಾತುಗಳನ್ನು ಟೀಕಿಸಲಿ ಅಂತಲೇ ಹಾಗೆಲ್ಲ ಮಾತಾಡಿದ್ದು: ಡಿಕೆ ಶಿವಕುಮಾರ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.