India-Pakistan War Updates; ಭಾರತ ಪೂರ್ಣಪ್ರಮಾಣದ ಯುದ್ಧ ಮಾಡಿದರೆ ಪಾಕಿಸ್ತಾನ 4 ಭಾಗಗಳಲ್ಲಿ ಒಡೆಯಲಿದೆ: ಚಕ್ರವರ್ತಿ ಸೂಲಿಬೆಲೆ
ದಿನೇದಿನೆ ಕುಸಿಯುತ್ತಿರುವ ಪಾಕಿಸ್ತಾನ ಛಿದ್ರಗೊಳ್ಳುವುದು ನಿಜ, ಇಮ್ರಾನ್ ಖಾನ್ ಬೆಂಬಲಿಗರು ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ, ಭಾರತವೇನಾದರೂ ಪೂರ್ಣಪ್ರಮಾಣದ ಯುದ್ಧ ಶುರುಮಾಡಿದರೆ, ಪಾಕಿಸ್ತಾನ ನಾಲ್ಕು ಭಾಗಗಳಲ್ಲಿ ಒಡೆದು ಹೋಗಲಿದೆ, ಬಲೂಚಿಗಳು ಪ್ರತ್ಯೇಕ ಪ್ರಾಂತ್ಯ ಮಾಡಿಕೊಳ್ಳುತ್ತಾರೆ, ಸಿಂಧೂ ಪ್ರಾಂತ್ಯ ಬೇರೆಯಾಗುತ್ತದೆ, ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರುತ್ತದೆ, ಇನ್ನುಳಿದಿದ್ದು ಪಾಕಿಸ್ತಾನ ಎಂದು ಸೂಲಿಬೆಲೆ ಹೇಳಿದರು.
ಬೆಂಗಳೂರು, ಮೇ 9: ನಗರದಲ್ಲಿ ಟಿವಿ9 ನೊಂದಿಗೆ ಮಾತಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele,) ಪಾಕಿಸ್ತಾನ ಮತ್ತು ಅದರ ಜನತೆ ಬಹಳ ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಅಲ್ಲಿನ ಜನ ತಮ್ಮ ಬ್ಯಾಂಕ್ ಖಾತೆಗಳಿಂದ ₹ 3,000 ಕ್ಕಿಂ ಹೆಚ್ಚು ವಿತ್ಡ್ರಾ ಮಾಡುವಂತಿಲ್ಲ, ಪಾಕಿಸ್ತಾನ ಸರ್ಕಾರ ಹಣ ನೀಡಿ ಅಂತ ಜನರ ಬಳಿ ಭಿಕ್ಷೆ ಬೇಡುತ್ತಿದೆ, ಆದರೆ ನಮ್ಮಲ್ಲಿ ಎಲ್ಲವೂ ಮಾಮೂಲಿಯಂತೆ ನಡೆಯುತ್ತಿದೆ, ಭಾರತ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿರುವ ಲಕ್ಷಣ ಇದು, ನಮ್ಮ ದೇಶದಲ್ಲಿ ಎಲ್ಲರೂ ಸರ್ಕಾರದ ಜೊತೆ ನಿಂತಿದ್ದಾರೆ, ಮುಸಲ್ಮಾನರೂ ಸರ್ಕಾರದ ಜೊತೆ ಇದ್ದಾರೆ, ಪಾಕಿಸ್ತಾನದಲ್ಲಿ ಇಂಥ ಸ್ಥಿತಿಯಿಲ್ಲದ ಕಾರಣ ನಾಯಕತ್ವವನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: India-Pakistan War Updates; ಬೆಳಗಿನ ಹೊತ್ತಲ್ಲೇ ರಜೌರಿ ಬಳಿಯ ಪಾಕಿಸ್ತಾನಿ ಪೋಸ್ಟ್ಗಳು ಭಾರತೀಯ ಸೇನೆಯಿಂದ ಧ್ವಂಸ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ