Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾತಾವರಣ ತಿಳಿಯಾದರೆ ಬಿಜೆಪಿಯಲ್ಲೇ ಮುಂದುವರಿಯುವೆ, ತಿಳಿಯಾಗುವ ಬಗ್ಗೆ ಸಂಪೂರ್ಣ ಭರವಸೆ ಇದೆ: ಎಸ್ ಟಿ ಸೋಮಶೇಖರ್, ಶಾಸಕ

ವಾತಾವರಣ ತಿಳಿಯಾದರೆ ಬಿಜೆಪಿಯಲ್ಲೇ ಮುಂದುವರಿಯುವೆ, ತಿಳಿಯಾಗುವ ಬಗ್ಗೆ ಸಂಪೂರ್ಣ ಭರವಸೆ ಇದೆ: ಎಸ್ ಟಿ ಸೋಮಶೇಖರ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2023 | 5:31 PM

ಪಕ್ಷದ ವರಿಷ್ಠರ ಬಗ್ಗೆ ಹೆಚ್ಚಿನ ವಿಶ್ವಾಸ ವ್ಕಕ್ತಪಡಿಸಿದ ಅವರು, ಬಿಎಸ್ ಯಡಿಯೂರಪ್ಪ ಈಗಾಗಲೇ ತಮ್ಮೊಂದಿಗೆ ಮಾತಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಅಂತ ಹೇಳಿದರು. ಬಿಜೆಪಿ ಹೈಕಮಾಂಡ್ ಸಹ ಕೊಟ್ಟ ಮಾತಿಗೆ ಯಾವತ್ತೂ ತಪ್ಪಿಲ್ಲ ಎಂದು ಸೋಮಶೇಖರ್ ಹೇಳಿದರು.

ಬೆಂಗಳೂರು: ತಮ್ಮ ಕ್ಷೇತ್ರ ಯಶವಂತಪುರದಲ್ಲಿ ಅಹಿತಕರ ಮತ್ತು ಪ್ರತಿಕೂಲ ವಾತಾವರಣ ಸೃಷ್ಟಿಯಾಗಿದೆ, ಅದು ತಿಳಿಯಾಗದ ಹೊರತು, ಬಿಜೆಪಿಯಲ್ಲಿ ಮುಂದುವರಿಯಲಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಹೇಳುತ್ತಾರೆ. ಟಿವಿ9 ಕನ್ನಡ ವಾಹಿನಿಯೊಂದಿಗೆ ನಡೆಸಿದ ಎಕ್ಸ್ ಕ್ಲ್ಯೂಸಿವ್ ಮಾತುಕತೆಯಲ್ಲಿ ಮನಬಿಚ್ಟಿ ಮಾತಾಡಿರುವ ಎಸ್ಟಿಎಸ್, ವಾತಾವಾರಣ ತಿಳಿಯಾಗದಿದ್ದರೆ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ವಾಪಸ್ಸು ಹೋಗುತ್ತೀರಾ ಅಮತ ಕೇಳಿದ ಪ್ರಶ್ನೆಗೆ ಅವರು ಅಂಥ ಪರಿಸ್ಥಿತಿ ತಲೆದೋರದು ಎಂಬ ಖಾತ್ರಿಯಿದೆ, ಪರಿಸ್ಥಿತಿ ತಿಳಿಯಾಗುವ ಬಗ್ಗೆ ಶೇಕಡ 100 ರಷ್ಟು ಭರವಸೆ ಇದೆ ಎಂದು ಹೇಳಿದರು. ಪಕ್ಷದ ವರಿಷ್ಠರ ಬಗ್ಗೆ ಹೆಚ್ಚಿನ ವಿಶ್ವಾಸ ವ್ಕಕ್ತಪಡಿಸಿದ ಅವರು, ಬಿಎಸ್ ಯಡಿಯೂರಪ್ಪ (BS Yediyurappa) ಈಗಾಗಲೇ ತಮ್ಮೊಂದಿಗೆ ಮಾತಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಅಂತ ಹೇಳಿದರು. ಬಿಜೆಪಿ ಹೈಕಮಾಂಡ್ (high command) ಸಹ ಕೊಟ್ಟ ಮಾತಿಗೆ ಯಾವತ್ತೂ ತಪ್ಪಿಲ್ಲ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ