ಬೆಂಗಳೂರು ಮಳೆ ಅವಾಂತರ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಚಾಲಕ, ಮಕ್ಕಳು ಕಂಗಾಲು
ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ಅದರಂತೆ ಯಮಲೂರು- ಬೆಳ್ಳಂದೂರಿ ನಡು ರಸ್ತೆಯಲ್ಲಿ ಶಾಲಾ ವಾಹನ ಸಿಲುಕಿರುವ ಘಟನೆ ನಡೆದಿದ್ದು, ಭಾರಿ ನೀರು ಕಂಡು ಚಾಲಕ, ಶಾಲಾ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ನಂತರ ಸುರಕ್ಷಿತ ಸ್ಥಳಕ್ಕೆ ಮಕ್ಕಳು ಬಂದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು, ಅ.15: ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ಅದರಂತೆ ಯಮಲೂರು- ಬೆಳ್ಳಂದೂರಿ ನಡು ರಸ್ತೆಯಲ್ಲಿ ಶಾಲಾ ವಾಹನ ಸಿಲುಕಿರುವ ಘಟನೆ ನಡೆದಿದ್ದು, ಭಾರಿ ನೀರು ಕಂಡು ಚಾಲಕ, ಶಾಲಾ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ಅರ್ಧ ಬಸ್ ಮುಳುಗಿದ್ದ ಹಿನ್ನಲೆ ಅಪಾಯವನ್ನ ಅರಿತ ಚಾಲಕ ವಾಪಸ್ ಹಿಂದಕ್ಕೆ ಸ್ಕೂಲ್ ಬಸ್ ತೆಗೆದುಕೊಂಡು ಬಂದಿದ್ದಾನೆ. ಬಳಿಕ ಪೋಷಕರು ಮಕ್ಕಳನ್ನ ಬಸ್ನಿಂದ ಇಳಿಸಿಕೊಳ್ಳಲು ರಸ್ತೆಗೆ ಬಂದಿದ್ದು, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಸುರಕ್ಷಿತ ಸ್ಥಳಕ್ಕೆ ಮಕ್ಕಳು ಬಂದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us