ಬೆಂಗಳೂರು ಮಳೆ ಅವಾಂತರ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಚಾಲಕ, ಮಕ್ಕಳು ಕಂಗಾಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2024 | 7:07 PM

ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ಅದರಂತೆ ಯಮಲೂರು- ಬೆಳ್ಳಂದೂರಿ ನಡು ರಸ್ತೆಯಲ್ಲಿ ಶಾಲಾ ವಾಹನ ಸಿಲುಕಿರುವ ಘಟನೆ ನಡೆದಿದ್ದು, ಭಾರಿ ನೀರು ಕಂಡು ಚಾಲಕ, ಶಾಲಾ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ನಂತರ ಸುರಕ್ಷಿತ ಸ್ಥಳಕ್ಕೆ ಮಕ್ಕಳು ಬಂದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು, ಅ.15: ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ಅದರಂತೆ ಯಮಲೂರು- ಬೆಳ್ಳಂದೂರಿ ನಡು ರಸ್ತೆಯಲ್ಲಿ ಶಾಲಾ ವಾಹನ ಸಿಲುಕಿರುವ ಘಟನೆ ನಡೆದಿದ್ದು, ಭಾರಿ ನೀರು ಕಂಡು ಚಾಲಕ, ಶಾಲಾ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ಅರ್ಧ ಬಸ್ ಮುಳುಗಿದ್ದ ಹಿನ್ನಲೆ ಅಪಾಯವನ್ನ ಅರಿತ ಚಾಲಕ​ ವಾಪಸ್ ಹಿಂದಕ್ಕೆ ಸ್ಕೂಲ್ ಬಸ್ ತೆಗೆದುಕೊಂಡು ಬಂದಿದ್ದಾನೆ. ಬಳಿಕ ಪೋಷಕರು ಮಕ್ಕಳನ್ನ ಬಸ್​ನಿಂದ ಇಳಿಸಿಕೊಳ್ಳಲು ರಸ್ತೆಗೆ ಬಂದಿದ್ದು, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಸುರಕ್ಷಿತ ಸ್ಥಳಕ್ಕೆ ಮಕ್ಕಳು ಬಂದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on