AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ಇನ್ನೆಷ್ಟು ದಿನ ರಾಜಕಾರಣ ನಡೆಸುತ್ತಾರೆ? ಎನ್ ಚಲುವರಾಯಸ್ವಾಮಿ

ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ಇನ್ನೆಷ್ಟು ದಿನ ರಾಜಕಾರಣ ನಡೆಸುತ್ತಾರೆ? ಎನ್ ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 05, 2023 | 12:56 PM

ಆದರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಡಿದ್ದಾರೆ, ಹಾಗಾಗಿ ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಅವರ ವೈಯಕ್ತಿಕ ಐಡೆಂಟಿಟಿ ಏನೂ ಇಲ್ಲ ಎಂದು ಚಲುವರಾಯಸ್ವಾಮಿ ತಿವಿದರು.

ಮಂಡ್ಯ: ಜೆಡಿಎಸ್ ಪಕ್ಷದಿಂದ ಹೊರಬಂದು ಕಾಂಗ್ರೆಸ್ ಪಕ್ಷ ಸೇರಿ ಈಗ ಸರ್ಕಾರದ ಭಾಗವಾಗಿರುವ ನಾಯಕರಿಗೆ ತಮ್ಮ ಹಳೆಯ ನಾಯಕ ಮತ್ತು ಒಂದು ಕಾಲದ ಆಪ್ತಮಿತ್ರ ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ಟೀಕಿಸುವುದೆಂದರೆ ಎಲ್ಲಿಲ್ಲದ ಖುಷಿ. ‘ಕುಮಾರಣ್ಣ ಬ್ರದರ್’ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಟೀಕೆ-ಟಿಪ್ಪಣಿಯ ಪ್ರವರ ಹೆಚ್ಚಿದೆ. ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಸಂದರ್ಭ ಸಿಕ್ಕಾಗಲೆಲ್ಲ ಕುಮಾರಸ್ವಾಮಿಯನ್ನು ತೆಗಳುತ್ತಾರೆ. ಈ ವಿಷಯದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಜಮೀರ್​ ಗಿಂತ ಒಂದು ಕೈ ಮೇಲೆಂದರೆ ತಪ್ಪಾಗಲಾರದು. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಚಲುವರಾಯಸ್ವಾಮಿ, ಕುಮಾರಸ್ವಾಮಿಗೆ ಮಂಡ್ಯದಲ್ಲಿ ಅನುಯಾಯಿಗಳಿರಬಹುದು ಆದರೆ ಜಿಲ್ಲೆಗೆ ಮತ್ತು ಕಾವೇರಿ ಅಚ್ಚುಕಟ್ಟುಗೆ ಅವರ ಕೊಡುಗೆ ಏನೂ ಇಲ್ಲ ಎಂದು ಹೇಳಿದರು. ಆದರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಡಿದ್ದಾರೆ, ಹಾಗಾಗಿ ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಅವರ ವೈಯಕ್ತಿಕ ಐಡೆಂಟಿಟಿ ಏನೂ ಇಲ್ಲ ಎಂದು ಚಲುವರಾಯಸ್ವಾಮಿ ತಿವಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ