ಬೆಂಗಳೂರಿಂದ ಕೆಆರ್ಎಸ್ವರೆಗೆ ರ್ಯಾಲಿಯಲ್ಲಿ ಹೊರಟು ಜಲಾಶಯದ ಬಳಿ ಸತ್ಯಾಗ್ರಹ ಮಾಡುತ್ತೇವೆ: ವಾಟಾಳ್ ನಾಗರಾಜ್
ರ್ಯಾಲಿಯು ಬಿಡದಿ-ರಾಮನಗರ-ಮಂಡ್ಯ-ಮದ್ದೂರು-ಶ್ರೀರಂಗಪಟ್ಟಣಗಳ ಮೂಲಕ ಕೆಆರ್ ಎಸ್ ತಲುಪಿದ ನಂತರ ಅಲ್ಲಿ ತಮಿಳುನಾಡುಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸತ್ಯಾಗ್ರಹ ನಡೆಸಲಾಗುವುದು, ರಸ್ತೆಯಲ್ಲಿ ಹಲವಾರು ಊರು, ಪಟ್ಟಣಗಳಲ್ಲಿರುವ ಕನ್ನಡ ಸಂಘಟನೆಗಳ ಸದಸ್ಯರು ರ್ಯಾಲಿಯಲ್ಲಿ ಸೇರಲಿದ್ದಾರೆ ಎಂದು ವಾಟಾಳ್ ಹೇಳಿದರು.
ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕನ್ನಡ ಪರ ಸಂಘಟನೆಗಳ (pro Kannada organizations) ಹೋರಾಟ ಮುಂದುವರಿದಿದೆ. ಮೊನ್ನೆ ಅಖಿಲ ಕರ್ನಾಟಕ ಬಂದ್ (Karnataka Bandh) ಆಯೋಜಿಸಿ ತಮಿಳುನಾಡುಗೆ ನೀರು ಬಿಡದಂತೆ ಸರ್ಕಾರವನ್ನು ಆಗ್ರಹಿಸಿದರೂ ಸರ್ಕಾರದ ಮೇಲೆ ಯಾವುದೇ ಪರಿಣಾಮ ಎನ್ನುತ್ತಿರುವ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ನೀರು ಬಿಡೋದನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರು ಹೋರಾಟದ ಭಾಗವಾಗಿ ಬೆಂಗಳೂರು ನಗರದಿಂದ ಕೆಆರ್ ಎಸ್ ಜಲಾಶಯದವರೆಗೆ ವಾಹನ ರ್ಯಾಲಿಯನ್ನು ಆಯೋಜಿಸಲಾಗಿದ್ದು ಇದರಲ್ಲಿ ಕನ್ನಡ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ರ್ಯಾಲಿಯು ಬಿಡದಿ-ರಾಮನಗರ-ಮಂಡ್ಯ-ಮದ್ದೂರು-ಶ್ರೀರಂಗಪಟ್ಟಣಗಳ ಮೂಲಕ ಕೆಆರ್ ಎಸ್ ತಲುಪಿದ ನಂತರ ಅಲ್ಲಿ ತಮಿಳುನಾಡುಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸತ್ಯಾಗ್ರಹ ನಡೆಸಲಾಗುವುದು, ರಸ್ತೆಯಲ್ಲಿ ಹಲವಾರು ಊರು, ಪಟ್ಟಣಗಳಲ್ಲಿರುವ ಕನ್ನಡ ಸಂಘಟನೆಗಳ ಸದಸ್ಯರು ರ್ಯಾಲಿಯಲ್ಲಿ ಸೇರಲಿದ್ದಾರೆ ಎಂದು ಹೇಳಿದರು. ರ್ಯಾಲಿಯನ್ನು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಬೇರೆ ಮಾರ್ಗದಿಂದ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
