AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ': ನಮ್ಮ ನಡತೆಯೇ ಸಮುದಾಯದ ರಕ್ಷಣೆ ಎಂದ ಕೆ.ಎನ್. ರಾಜಣ್ಣ

‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ’: ನಮ್ಮ ನಡತೆಯೇ ಸಮುದಾಯದ ರಕ್ಷಣೆ ಎಂದ ಕೆ.ಎನ್. ರಾಜಣ್ಣ

Jagadisha B
| Edited By: |

Updated on:Jun 26, 2026 | 6:04 PM

Share

ಕೆ.ಎನ್. ರಾಜಣ್ಣ ಅವರು ತಮ್ಮ ರಾಜಕೀಯ ಪಯಣದ ಬಗ್ಗೆ ಮಾತನಾಡಿದ್ದಾರೆ. ಮೀಸಲಾತಿಯನ್ನು ಅವಲಂಬಿಸಿದ್ದರೆ ಶಾಸಕನಾಗಲು ಸಾಧ್ಯವಿರಲಿಲ್ಲ ಎಂದಿರುವ ಅವರು, ಸಮುದಾಯದ ಘನತೆಯನ್ನು ಕಾಪಾಡಿಕೊಂಡು, ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸುವುದರಿಂದ ಮಾತ್ರ ರಾಜಕೀಯ ಯಶಸ್ಸು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಸಮುದಾಯದ ಬಗ್ಗೆ ಜನರಲ್ಲಿ ಸಹಾನುಭೂತಿ ಮೂಡಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

  • ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆ ನೀಡಿದ ಕೆ.ಎನ್. ರಾಜಣ್ಣ
  • ಮೀಸಲಾತಿಯನ್ನು ನಂಬಿಕೊಂಡು ರಾಜಕಾರಣ ಮಾಡಿದ್ದರೆ ನಾನು ಶಾಸಕನೇ ಆಗ್ತಿರಲಿಲ್ಲ
  • ರಾಜಕೀಯಕ್ಕೆ ಬರುವ ಮುನ್ನ ತಮ್ಮ ಸಮುದಾಯದ ಬಗ್ಗೆ ಹಲವರಿಗೆ ತಿಳಿದಿರಲಿಲ್ಲ

ತುಮಕೂರು, ಜೂ.26: ಕೆ.ಎನ್. ರಾಜಣ್ಣ ಅವರು ತಮ್ಮ ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಮೀಸಲಾತಿಯನ್ನು ನಂಬಿಕೊಂಡು ರಾಜಕಾರಣ ಮಾಡಿದ್ದರೆ ನಾನು ಶಾಸಕನೇ ಆಗ್ತಿರಲಿಲ್ಲ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ರಾಜಕೀಯಕ್ಕೆ ಬರುವ ಮುನ್ನ ತಮ್ಮ ಸಮುದಾಯದ ಬಗ್ಗೆ ಹಲವರಿಗೆ ತಿಳಿದಿರಲಿಲ್ಲ. ಈ ವೇಳೆ ರಾಜಣ್ಣ ಅವರು ತಮ್ಮ ಸಮುದಾಯದ ಹಿಂದಿನ ಶಾಸಕರಾದ ಕೆ.ಎಲ್. ನರಸಿಂಹಯ್ಯ, ಸಾಲಿಂಗಯ್ಯ ಮತ್ತು ವೀರಣ್ಣ ಅವರ ಕೊಡುಗೆಗಳನ್ನು ನೆನಪಿಸಿಕೊಂಡರು. ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬಂದಾಗ, ಅವರ ಕೆಟ್ಟ ಹೆಸರು ವೈಯಕ್ತಿಕವಾಗಿ ಮಾತ್ರವಲ್ಲದೆ, ಇಡೀ ಸಮುದಾಯಕ್ಕೂ ಅನ್ವಯಿಸುತ್ತದೆ. ಸಮುದಾಯದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ನಾಯಕನ ಜವಾಬ್ದಾರಿ. ನಮ್ಮ ಸಮುದಾಯಕ್ಕೆ ರಕ್ಷಣೆ ಇರುವುದು ನಮ್ಮ ನಡತೆ ಮತ್ತು ನಾವು ಮಾಡುವ ಕೆಲಸದಲ್ಲಿಯೇ ಹೊರತು ಬೇರೊಂದರಲ್ಲಿ ಅಲ್ಲ. ನಾನು ಜನರಲ್ ಸೀಟ್‌ನಲ್ಲಿ ಸ್ಪರ್ಧಿಸಿ, ಎಲ್ಲಾ ಸಮುದಾಯಗಳ ಆಶೀರ್ವಾದದಿಂದ ಮೂರು ಬಾರಿ ಶಾಸಕ ಹಾಗೂ ಒಂದು ಬಾರಿ ಎಂಎಲ್‌ಸಿ ಆಗಿದ್ದೇನೆ ಎಂದು ಹೇಳಿದ್ದಾರೆ. 1998ರಲ್ಲಿ ಕಾಂಗ್ರೆಸ್ ಅಲ್ಪಮತದಲ್ಲಿದ್ದಾಗಲೂ ಜನರು ತಮಗೆ ಭಾರೀ ಬಹುಮತದಿಂದ ಗೆಲುವು ನೀಡಿದ್ದನ್ನು ಅವರು ಸ್ಮರಿಸಿದರು. ಕೇವಲ ಕಾಂಗ್ರೆಸ್ ಮತಗಳಿಂದ ಗೆಲ್ಲಲು ಸಾಧ್ಯವಿರಲಿಲ್ಲ, ಎಲ್ಲಾ ಸಮುದಾಯಗಳ ಬೆಂಬಲ ನಿರ್ಣಾಯಕವಾಗಿತ್ತು ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 26, 2026 06:04 PM

Follow Us