ಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರು

|

Updated on: Mar 19, 2023 | 9:58 PM

ಕಬ್ಜ ಸಿನಿಮಾ ಮೂಲಕ ದೊಡ್ಡ ಗೆಲುವನ್ನು ಆರ್.ಚಂದ್ರು ಸಾಧಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟಗಳನ್ನು ನೆನೆದು ಚಂದ್ರು ಕಣ್ಣೀರು ಹಾಕಿದ್ದಾರೆ. ಅವರ ಕಷ್ಟದ ಕತೆ ಅವರಿಂದಲೇ ಕೇಳಿ.

ಕಬ್ಜ (Kabzaa) ಸಿನಿಮಾ ಮೂಲಕ ಆರ್.ಚಂದ್ರು (R Chandru) ದೊಡ್ಡ ಗೆಲುವು ಸಾಧಿಸಿದ್ದಾರೆ. ಚಂದ್ರು ಪಾಲಿಗೆ ಈ ಗೆಲುವು ಬಹಳ ಮಹತ್ವದ್ದು. ಈ ಗೆಲುವು ಅವರ ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರು ಎದುರಿಸಿದ ಅವಮಾನಗಳಿಗೆ ಕೊಟ್ಟ ದಿಟ್ಟ ಉತ್ತರ. ಹಾಗಾಗಿ ಸಹಜವಾಗಿಯೇ ಈ ಗೆಲುವು ಅವರನ್ನು ಭಾವುಕರನ್ನಾಗಿಸಿದೆ. ಸಿನಿಮಾದ ಗೆಲುವಿನ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್.ಚಂದ್ರು, ಚಿತ್ರೀಕರಣದ ಸಂದರ್ಭದಲ್ಲಿ ತಾವೆದುರಿಸಿದ ಕಷ್ಟಗಳ ನೆನೆದು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:54 pm, Sun, 19 March 23

Follow us on