ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?

ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2021 | 5:46 PM

ಅಫಘಾನಿಸ್ತಾನ ಪಂಜಶೀರ್ ಪ್ರಾಂತ್ಯದ ಯೋಧನೊಬ್ಬ ತನ್ನ ಮಶೀನ್ ಗನ್ ಅನ್ನು ಕೆಜಿಎಫ್ ಚಾಪ್ಟರ್ 2 ನಲ್ಲಿ ಥೇಟ್ ಯಶ್ ಅವರು ಮಾಡಿರುವ ರೀತಿಯಲ್ಲೇ ಲೋಡ್ ಮಾಡುತ್ತಿದ್ದಾನೆ. ಈ ಯೋಧನಿಗೂ ನಮ್ಮ ಕನ್ನಡದ ಹುಡುಗ ಸ್ಪೂರ್ತಿಯೇ? ಇದ್ದರೂ ಇರಬಹುದು.

ಎಲ್ಲಿಯ ಅಫಘಾನಿಸ್ತಾನದ ಪಂಜಶೀರ್ ಎಲ್ಲಿಯ ನಮ್ಮ ಕನ್ನಡ ಮೂವೀ ಕೆಜಿಎಫ್ ಚಾಪ್ಟರ್ 2 ಅಂತ ನೀವು ಅಂದುಕೊಳ್ಳುತ್ತಿರಬಹುದು. ಆದರೆ ಯಶ್ ಅಭಿನಯದ ಈ ಚಿತ್ರದ ಟೀಸರ್ ಕರ್ನಾಟಕದೊಂದಿಗೆ ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿದೇಶಗಳಲ್ಲೂ ಬಿಡುಗಡೆಯಾಗಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿಯೇ. ನಮಗೆ ಗೊತ್ತಿರುವ ಇನ್ನೊಂದು ವಿಷಯವೆಂದರೆ, ನಮ್ಮ ನೆರೆರಾಷ್ಟ್ರಗಳಲ್ಲಿ ಬಾಲಿವುಡ್ ಸಿನಿಮಾಗಳ ಬಗ್ಗೆ ವಿಪರೀತ ಕ್ರೇಝ್ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 ಹಿಂದಿಗೂ ಡಬ್ ಆಗಿ ಜನಪ್ರಿಯಗೊಂಡಿತ್ತು. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಬಾಲಿವುಡ್ ಸಿನಿಮಾಗಳು ಹೋಗುವಂತೆ ಕೆಜಿಎಫ್ ಸಹ ಹೋಗಿರಬಹುದು.

ನಾವು ಹೀಗೆ ಹೇಳುತ್ತಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಅದೇನು ಗೊತ್ತಾ? ಇಲ್ಲಿರುವ ವಿಡಿಯೋ ನೋಡಿ. ವಿಡಿಯೋ ಎಡಭಾಗದಲ್ಲಿ ಅಫಘಾನಿಸ್ತಾನ ಪಂಜಶೀರ್ ಪ್ರಾಂತ್ಯದ ಯೋಧನೊಬ್ಬ ತನ್ನ ಮಶೀನ್ ಗನ್ ಅನ್ನು ಕೆಜಿಎಫ್ ಚಾಪ್ಟರ್ 2 ನಲ್ಲಿ ಥೇಟ್ ಯಶ್ ಅವರು ಮಾಡಿರುವ ರೀತಿಯಲ್ಲೇ ಲೋಡ್ ಮಾಡುತ್ತಿದ್ದಾನೆ. ಈ ಯೋಧನಿಗೂ ನಮ್ಮ ಕನ್ನಡದ ಹುಡುಗ ಸ್ಪೂರ್ತಿಯೇ? ಇದ್ದರೂ ಇರಬಹುದು.

ಅಂದಹಾಗೆ, ಕೊವಿಡ್-19 ಪಿಡುಗಿನಿಂದಾಗಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ತಡವಾಗುತ್ತಿದೆ. ಕೇವಲ ಯಶ್ ಅಭಿಮಾನಿಗಳು ಮಾತ್ರವಲ್ಲ ಅಸಂಖ್ಯಾತ ಫಿಲ್ಮೀ ಬಫ್ಗಳು ಚಿತ್ರದ ಬಿಡುಗಡೆಯನ್ನು ಬಹಳ ಕಾತುರತೆಯಿಂದ ವೀಕ್ಷಿಸುತ್ತಿದ್ದಾರೆ. ಯಾಕೆಂದರೆ, ಕೆಜಿಎಫ್ ಚಾಪ್ಟರ್ 1 ಚಿತ್ರ ಸೃಷ್ಟಿಸಿದ ಹವಾ ಸಾಮಾನ್ಯವಾದುದಲ್ಲ. ಬೇರೆ ನಟರ ಅಭಿಮಾನಿಗಳು ಸಹ ಚಿತ್ರವನ್ನು ಮುಗಿಬಿದ್ದು ನೋಡಿದ್ದರು.

ಓಕೆ, ಕೆಜಿಎಫ್ ಚಾಪ್ಟರ್ 2 ರಿಲೀಸ್ ಕುರಿತು ಖುದ್ದು ಯಶ್ ಟ್ವೀಟ್ ಮಾಡಿ ಏಪ್ರಿಲ್ 14, 2022 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ‘ಪ್ರಸಕ್ತ ಸ್ಥಿತಿಯ ಅನಿಶ್ಚಿತತೆಗಳು ನಮ್ಮ ಬದ್ದತೆಯನ್ನು ಮಾತ್ರ ವಿಳಂಬಗೊಳಿಸಬಲ್ಲವು. ಆದರೆ, ಕೊನೆ ಮಾತ್ರ ನಾವು ಪ್ರಾಮಿಸ್ ಮಾಡಿದಂತೆಯೇ ಆಗಲಿದೆ. ಏಪ್ರಿಲ್ 14, 2022 ರಂದು ನಮ್ಮನ್ನು ನೀವು ಚಿತ್ರಮಂದಿರಗಳಲ್ಲಿ ಕಾಣಲಿದ್ದೀರಿ.’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ

Follow us
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ