ಚುನಾವಣೆಯಲ್ಲಿ ಜವಾಬ್ದಾರಿವಹಿಸಿಕೊಂಡವರು ಎಸಗಿದ ಪ್ರಮಾದಗಳಿಂದ ಪಕ್ಷಕ್ಕೆ ಹಲವಾರು ಕಡೆ ಸೋಲಾಯಿತು: ಬಸನಗೌಡ ಯತ್ನಾಳ್

ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿನ ಹಾಲಿ ಸದಸ್ಯರಾಗಿದ್ದವರು ಕ್ಷೇತ್ರಗಳಲ್ಲಿ ಕೆಲಸವೇ ಮಾಡಿರಲಿಲ್ಲ ಮತ್ತು ಜನರೊಂದಿಗೆ ಸಂಪರ್ಕ ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರಿಗೆ ಪಕ್ಷದ ವರಿಷ್ಠರು ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಬೇಕಿತ್ತು, ಅವರಿಂದಾಗೇ ಪಕ್ಷಕ್ಕೆ 350 ಸ್ಥಾನ ಸಿಗೋದು ತಪ್ಪಿತು ಎಂದು ಯತ್ನಾಳ್ ಹೇಳಿದರು.

ಚುನಾವಣೆಯಲ್ಲಿ ಜವಾಬ್ದಾರಿವಹಿಸಿಕೊಂಡವರು ಎಸಗಿದ ಪ್ರಮಾದಗಳಿಂದ ಪಕ್ಷಕ್ಕೆ ಹಲವಾರು ಕಡೆ ಸೋಲಾಯಿತು: ಬಸನಗೌಡ ಯತ್ನಾಳ್
|

Updated on: Jun 24, 2024 | 8:26 PM

ವಿಜಯಪುರ: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಟೀಕೆ ಮಾಡುವುದನ್ನು ಮುಂದುವರಿಸಿರುವರಾದರೂ ಅವರ ಧೋರಣೆಯಲ್ಲಿ ಕೊಂಚ ಬದಲಾವಣೆ ಬಂದಿದೆ. ಅವರ ಮಾತುಗಳಲ್ಲಿ ಮೊದಲಿನ ಉಗ್ರತೆ, ತೀಕ್ಷ್ಣತೆ ಮಾಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳ ಸೋಲಿಗೆ ವಿಜಯೇಂದ್ರ ಕಾರಣವಾಗಿದ್ದಾರೆ ಎಂದು ಯತ್ನಾಳ್ ಸೌಮ್ಯವಾಗಿ ಹೇಳುತ್ತಾರೆ. ತನ್ನನ್ನು ಸೋಲಿಸಲು ಬಿಜೆಪಿಯಿಂದ ಹಣ ಕಳಿಸಲಾಗಿತ್ತು ಎಂದು ತುಮಕೂರು ಕ್ಷೇತ್ರದಿಂದ ಗೆದ್ದ ವಿ ಸೋಮಣ್ಣ ಹೇಳಿದ್ದಾರೆ. ಅವರಂತೆಯೇ ಡಾ ಉಮೇಶ್ ಜಾಧವ್, ಭಗವಂತ ಖೂಬಾ ಮತ್ತು ಬೇರೆ ಕೆಲ ನಾಯಕರು ಸಹ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ದಾವಣಗೆರೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಅವರು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲರ ದೂರುಗಳ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಯತ್ನಾಳ್ ಹೇಳಿದರು. ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿನ ಹಾಲಿ ಸದಸ್ಯರಾಗಿದ್ದವರು ಕ್ಷೇತ್ರಗಳಲ್ಲಿ ಕೆಲಸವೇ ಮಾಡಿರಲಿಲ್ಲ ಮತ್ತು ಜನರೊಂದಿಗೆ ಸಂಪರ್ಕ ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರಿಗೆ ಪಕ್ಷದ ವರಿಷ್ಠರು ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಬೇಕಿತ್ತು, ಅವರಿಂದಾಗೇ ಪಕ್ಷಕ್ಕೆ 350 ಸ್ಥಾನ ಸಿಗೋದು ತಪ್ಪಿತು ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್​ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್​: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ

Follow us
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’
ಅಪಘಾತಕ್ಕೀಡಾದ ಟಿಟಿಯನ್ನು15 ದಿನಗಳ ಹಿಂದೆ ಖರೀದಿಸಲಾಗಿತ್ತು: ಮೃತರ ಸಂಬಂಧಿ
ಅಪಘಾತಕ್ಕೀಡಾದ ಟಿಟಿಯನ್ನು15 ದಿನಗಳ ಹಿಂದೆ ಖರೀದಿಸಲಾಗಿತ್ತು: ಮೃತರ ಸಂಬಂಧಿ
ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ
ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ
ಕೊಲೆ ಕೇಸ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಸಿಕ್ಕಿವೆ 30ಕ್ಕೂ ಅಧಿಕ ಸಾಕ್ಷಿ
ಕೊಲೆ ಕೇಸ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಸಿಕ್ಕಿವೆ 30ಕ್ಕೂ ಅಧಿಕ ಸಾಕ್ಷಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ