ಭುವಿ ಸೀರೆ ಬಗ್ಗೆ ಅನೇಕರಿಗೆ ಇದೆ ತಕರಾರು; ರಂಜನಿ ರಾಘವನ್​ ಬಿಚ್ಚಿಟ್ಟ ಅಚ್ಚರಿ ಮಾಹಿತಿ

| Updated By: ರಾಜೇಶ್ ದುಗ್ಗುಮನೆ

Updated on: Feb 01, 2022 | 6:30 AM

ದಿನ ಕಳೆದಂತೆ ಭುವಿ ನಿಧಾನವಾಗಿ ಬದಲಾಗುತ್ತಿದ್ದಾಳೆ. ಅವರ ಪಾತ್ರ ಈ ಧಾರಾವಾಹಿಯಲ್ಲಿ ತುಂಬಾನೇ ಸಿಂಪಲ್​. ಈ ಕಾರಣಕ್ಕೆ ಅವರು ಸಿಂಪಲ್​ ಸೀರೆ ಉಡುತ್ತಾರೆ. ಆದರೆ, ಆ ಬಗ್ಗೆ ತಕರಾರರು ಇದೆಯಂತೆ.

ಕನ್ನಡತಿ ಧಾರಾವಾಹಿ (Kannadathi Serial) ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ಹರ್ಷ ಈಗಾಗಲೇ ಭುವಿಗೆ ಪ್ರೀತಿ ವ್ಯಕ್ತಪಡಿಸಿ ಆಗಿದೆ. ಭುವಿ ಇದನ್ನು ಒಪ್ಪಿಕೊಂಡಿದ್ದಾಳೆ. ಪ್ರೀತಿ ವಿಚಾರದಲ್ಲಿ ಹರ್ಷ ತುಂಬಾನೇ ಎಫರ್ಟ್​ ಹಾಕುತ್ತಿದ್ದಾನೆ. ಇದು ವೀಕ್ಷಕರಿಗೂ ಎದ್ದು ಕಾಣುತ್ತಿದೆ. ಭುವಿಯ ನಾಚಿಕೆ ಸ್ವಭಾವ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆಕೆ, ವರುಧಿನಿಯ ಫ್ರೆಂಡ್​ಶಿಪ್​ಗೆ ಕೊಂಚ ಅಂಜುತ್ತಾಳೆ. ಆದರೆ, ದಿನ ಕಳೆದಂತೆ ಭುವಿ ನಿಧಾನವಾಗಿ ಬದಲಾಗುತ್ತಿದ್ದಾಳೆ. ಅವರ ಪಾತ್ರ ಈ ಧಾರಾವಾಹಿಯಲ್ಲಿ ತುಂಬಾನೇ ಸಿಂಪಲ್​. ಈ ಕಾರಣಕ್ಕೆ ಅವರು ಸಿಂಪಲ್​ ಸೀರೆ ಉಡುತ್ತಾರೆ. ಆದರೆ, ಆ ಬಗ್ಗೆ ತಕರಾರರು ಇದೆಯಂತೆ. ಈ ಬಗ್ಗೆ ರಂಜನಿ ರಾಘವನ್ (Ranjani Raghavan)​ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹರ್ಷನಿಗೆ ಭುವಿ ಕಡೆಯಿಂದ ಸಿಗಲಿದೆ ಬಿಗ್​ ಸರ್​​ಪ್ರೈಸ್​​; ಟಿವಿ9ಗೆ ರಂಜನಿ ರಾಘವನ್ ಎಕ್ಸ್​ಕ್ಲೂಸಿವ್ ಮಾಹಿತಿ

‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​

Follow us on