ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

Edited By:

Updated on: Feb 27, 2026 | 7:15 PM

ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (Nepal) ಕಠ್ಮಂಡು (Kathmandu) ಹೊರಟಿದ್ದ ಕನ್ನಡಿಗರು (Kolar) ಪರದಾಡಿರುವ ಘಟನೆ ನಡೆದಿದೆ. ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇ

ಬೆಂಗಳೂರು, (ಫಬ್ರವರಿ 27): ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (Nepal) ಕಠ್ಮಂಡು (Kathmandu) ಹೊರಟಿದ್ದ ಕನ್ನಡಿಗರು (Kolar) ಪರದಾಡಿರುವ ಘಟನೆ ನಡೆದಿದೆ. ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇನ್ನು ವಿಮಾನದಲ್ಲಿ ಸರಿಯಾದ ಊಟ ನೀರು ಕೊಡದೆ ತೊಂದರೆ ಕೊಡ್ತಿದ್ದಾರೆ ಎಂದು ಪ್ರಯಾಣಿಕರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ(ಫೆಬ್ರವರಿ 26) ಬೆಳಗ್ಗೆ ಕಠ್ಮಂಡುಗೆ ಪ್ರಯಾಣ ಬೆಳೆಸಿದ್ದರು. ಆದ್ರೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ವಿಮಾನ, ದಿನ ಪೂರ್ತಿ ಸುತ್ತಾಡಿ ರಾತ್ರಿ ವಾಪಸ್ ಬೆಂಗಳೂರಿಗೆ ಬಂದಿದೆ. ನಂತರ ಇಂದು (ಫೆಬ್ರವರಿ 27) ಬೆಳಗ್ಗೆ ಮತ್ತೆ ಬೆಳಗ್ಗೆ ಅದೇ ಪ್ಲೈಟ್ ನಲ್ಲಿ 170 ಜನ ಪ್ರಯಾಣಿಕರನ್ನ ಕರೆದೊಯ್ದಿದೆ.

Loading...
Unable to load recommendations.
Follow Us