ಕಪ್ಪತ್ತಗುಡ್ಡದ ನಿಗೂಢ ಗುಹೆಗಳ ಸಾಮ್ರಾಜ್ಯ, ಚಿನ್ನದ ರಹಸ್ಯ ಬಯಲು!

Edited By:

Updated on: Feb 06, 2026 | 9:17 AM

ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿನ ನಿಗೂಢ ಗುಹೆಗಳಲ್ಲಿ ಅಪಾರ ಚಿನ್ನದ ನಿಕ್ಷೇಪವಿರುವ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಗುಹೆಗಳ ಒಳಗೆ ಚಿನ್ನದ ನಿಕ್ಷೇಪದ ರಹಸ್ಯದ ಬಗ್ಗೆ ‘ಟಿವಿ9’ ವಿಶೇಷ ವರದಿ ಮಾಡಿದ್ದು, ಅನೇಕ ವಿಚಾರಗಳನ್ನು ಅನಾವರಣಗೊಳಿಸಿದೆ. ಬ್ರಿಟಿಷರ ಕಾಲದಿಂದಲೂ ನಡೆಯುತ್ತಿದ್ದ ಗಣಿಗಾರಿಕೆ, ಸ್ಥಳೀಯರ ಬದುಕು ಹಾಗೂ ಕಾರ್ಮಿಕರು ಎದುರಿಸಿದ ಆರೋಗ್ಯ ಸಮಸ್ಯೆಗಳನ್ನು ವರದಿ ಬಯಲು ಮಾಡಿದೆ.

ಗದಗ, ಫೆಬ್ರವರಿ 6: ಗದಗ ಜಿಲ್ಲೆಯ ಕಪ್ಪತ್ತಗುಡ್ಡವು ಈಗ ರಾಜ್ಯದ ಗಮನ ಸೆಳೆದಿದೆ. ಐತಿಹಾಸಿಕ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ, ಕಪ್ಪತ್ತಗುಡ್ಡದ ನಿಗೂಢ ಗುಹೆಗಳಲ್ಲಿನ ಚಿನ್ನದ ರಹಸ್ಯ ಬಯಲಾಗುತ್ತಿದೆ. ಮಹಾಲಿಂಗಪುರ ಸಮೀಪದ ಕಪ್ಪತ್ತಗುಡ್ಡದಲ್ಲಿ ‘ಟಿವಿ9’ ಗ್ರೌಂಡ್ ರಿಪೋರ್ಟ್ ನಡೆಸಿದ್ದು, ಈ ಗುಹೆಗಳಲ್ಲಿ ಅಪಾರ ಚಿನ್ನದ ನಿಕ್ಷೇಪವಿರುವ ಸಾಧ್ಯತೆ ಕುರಿತು ಕುತೂಹಲ ಮೂಡಿಸಿದೆ. ಇಲ್ಲಿನ ದುರ್ಗಮ ರಸ್ತೆಗಳು ಮತ್ತು ಭಯಾನಕ ಕಾಡುಗಳ ಮಧ್ಯೆ ಇರುವ ಈ ಗುಹೆಗಳಿಗೆ ತಲುಪುವುದು ಸವಾಲಿನ ಕೆಲಸವಾಗಿದೆ. ಈ ಗುಹೆಗಳು ಒಂದರೊಳಗೊಂದು ಇರುವಂತೆ ಭಾಸವಾಗುತ್ತವೆ, ಪ್ರತಿ ಹೆಜ್ಜೆಯಲ್ಲೂ ಹೊಸ ಕೌತುಕ ಮೂಡಿಸುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎಂಬ ಐತಿಹಾಸಿಕ ಮಾಹಿತಿಯನ್ನು ಸ್ಥಳೀಯ ಹಿರಿಯರು ಬಹಿರಂಗಪಡಿಸಿದ್ದಾರೆ. ಕಪ್ಪತ್ತಗುಡ್ಡವು ‘ಔಷಧ ಸಸ್ಯಕಾಶಿ’ ಎಂದೂ ಹೆಸರಾಗಿದ್ದು, ಇದೀಗ ನಿಗೂಢ ಗುಹೆಗಳಲ್ಲಿ ಚಿನ್ನದ ನಿಕ್ಷೇಪ ಇದೆಯಾ ಎಂಬ ಕುತೂಹಲ ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ