AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಾನ್ ವಿರುದ್ಧ ಕೂಗುಮಾರಿಗಳ ಕೂಗು ಜೋರಾಗಿದೆ, ಸರಕಾರ ಯಾಕೋ ಮೌನಕ್ಕೆ ಜಾರಿದೆ: ಟಿವಿ9 ಡಿಜಿಟಲ್​ ಲೈವ್​ ಚರ್ಚೆಗೆ ಬನ್ನಿ

ಅಜಾನ್ ವಿರುದ್ಧ ಕೂಗುಮಾರಿಗಳ ಕೂಗು ಜೋರಾಗಿದೆ, ಸರಕಾರ ಯಾಕೋ ಮೌನಕ್ಕೆ ಜಾರಿದೆ: ಟಿವಿ9 ಡಿಜಿಟಲ್​ ಲೈವ್​ ಚರ್ಚೆಗೆ ಬನ್ನಿ

TV9 Web
| Updated By: ಸಾಧು ಶ್ರೀನಾಥ್​

Updated on:Apr 05, 2022 | 4:00 PM

Karnataka BJP Givernment: ಇದು ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲವಾಗಿದೆ. ಆಜಾನ್​ ​ನಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಅದನ್ನು ನಿಲ್ಲಿಸಬೇಕು ಎಂಬ ಕೂಗು ಜೋರಾಗಿದೆ. ಮುಸ್ಲಿಮರ ವಿರುದ್ಧ ಈ ರೀತಿ ಪ್ರಚಾರ ಕೈಗೊಂಡಿರುವ ಕೂಗುಮಾರಿಗಳು ಬಿಜೆಪಿಯ ಭಾಗ ಅಲ್ಲದಿದ್ದರೆ ಅವರ ವಿರುದ್ಧ ಬಿಜೆಪಿ ಸರಕಾರವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬುದು ಸದ್ಯದ ಚರ್ಚಾರ್ಹ ಪ್ರಶ್ನೆ.

ಬೆಂಗಳೂರು: ಲವ್ ಹಿಜಾದ್, ಅದಾದ ಮೇಲೆ ಹಿಜಾಬ್ ಇದೀಗ ಅಜಾನ್ ಹೀಗೆ ಸರಣಿ ಸಮುದಾಯ ಅಶಾಂತಿ ಕಾರ್ಯಯೋಜನೆಗಳು ಕರ್ನಾಟಕದಲ್ಲಿ ನಿರಂತರವಾಗಿ ಚಾಲ್ತಿಯಲ್ಲಿವೆ. ಇದು ಯಾರ ಯೋಜನೆಗಳೋ ಬಹಿರಂಗವಾಗಿ ತಿಳಿದಿಲ್ಲವಾದರೂ ಅದಕ್ಕೆ ಮೂಗುದಾರ ಹಾಕಬೇಕಿದ್ದ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪ, ಮಾತುಗಳೂ ಸಹಾ ಜಾರಿಯಲ್ಲಿವೆ. ಹೌದು ಹಿಂದೂ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂಬ ವಿವಾದದಿಂದ ಶುರುವಾದ ಹಿಂದೂ ಸಂಘಟನೆಗಳ ವಿವಾದ ಈಗ ಅಜಾನ್ ವರೆಗೂ ಬಂದು ನಿಂತಿದೆ.

ಇದು ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲವಾಗಿದೆ. ಆಜಾನ್​ ​ನಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಅದನ್ನು ನಿಲ್ಲಿಸಬೇಕು ಎಂಬ ಕೂಗು ಜೋರಾಗಿದೆ. ಮುಸ್ಲಿಮರ ವಿರುದ್ಧ ಈ ರೀತಿ ಪ್ರಚಾರ ಕೈಗೊಂಡಿರುವ ಕೂಗುಮಾರಿಗಳು ಬಿಜೆಪಿಯ ಭಾಗ ಅಲ್ಲದಿದ್ದರೆ ಅವರ ವಿರುದ್ಧ ಬಿಜೆಪಿ ಸರಕಾರವು (Karnataka BJP Government) ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬುದು ಸದ್ಯದ ಪ್ರಶ್ನೆ. ಈ ಕುರಿತು ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್​ನಲ್ಲಿ ಹಿರಿಯ ಆ್ಯಂಕರ್​ ಹರಿಪ್ರಸಾದ್​ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ರ ಈ ಚರ್ಚೆಗೆ ನಿಮಗಿದೋ ಸ್ವಾಗತ… ಕೂಗುಮಾರಿಗಳಿಗೆ ಸರಕಾರ ಮೂಗುದಾರ ಹಾಕುತ್ತಿಲ್ಲ, ಯಾಕೆ (Islamic Prayer, Azan, Namaz)?

 

Also Watch:
Karnataka Congress: ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

Also Watch:
RRR Box Office Collection: ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್​ಗೆ ಇನ್ನೆಷ್ಟು ದೂರ?

 

Published on: Apr 05, 2022 03:31 PM