1 ಎಕರೆಗೆ ಗರಿಷ್ಠ 15 ನಿವೇಶನಗಳ ಪರಿಹಾರ: ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ

Edited By:

Updated on: Sep 03, 2026 | 1:39 PM

ನೈಸ್ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ 25 ವರ್ಷಗಳ ಬಳಿಕ ಪರಿಹಾರ ಸಿಗುವ ಸಾಧ್ಯತೆ ಇದೆ. ಸಂಪುಟ ಉಪಸಮಿತಿಯು ಡಿಸಿಎಂ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಿ, ಪ್ರತಿ ಎಕರೆಗೆ ಗರಿಷ್ಠ 15 ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಲು ತೀರ್ಮಾನಿಸಿದೆ. ಈ ನಿರ್ಧಾರ ಅಂತಿಮ ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಮಂಡನೆಯಾಗಲಿದೆ.

ಬೆಂಗಳೂರು, ಸೆಪ್ಟೆಂಬರ್​​ 03: ನೈಸ್ ರಸ್ತೆ ವಿಚಾರದಲ್ಲಿ ಪರಿಹಾರ ಸಿಗದ ರೈತರಿಗೆ 1 ಎಕರೆಗೆ ಗರಿಷ್ಠ 15 ನಿವೇಶನಗಳ ಪರಿಹಾರ ನೀಡಲು ಡಿಸಿಎಂ ಡಾ.ಪರಮೇಶ್ವರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಪರಿಹಾರ ರೂಪದಲ್ಲಿ ನಿವೇಶನಗಳ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಕ್ಯಾಬಿನೆಟ್ ಸಬ್ ಕಮಿಟಿ ಈ ತೀರ್ಮಾನವನ್ನು ಸಂಪುಟ ಸಭೆಯ ಮುಂದೆ ಮಂಡಿಸಲಿದೆ. ನೈಸ್ ರಸ್ತೆ ಸಂಬಂಧ 25 ವರ್ಷದಿಂದ ಪರಿಹಾರ ನೀಡದ ಹಿನ್ನೆಲೆ ಹೈಕೋರ್ಟ್ ಗರಂ ಆಗಿತ್ತು. ರೈತರಿಗೆ ಪರಿಹಾರ ನೀಡದ ಕ್ರಮ ಅಮಾನವೀಯ ಎಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us